Thursday, December 8, 2022

ಹೂವು ದುಂಬಿ ಬಂದವಿದುವೇ...

ಹೂವು ದುಂಬಿ ಬಂದವಿದುವೇ 
ಬಾಳಿಗೊಡವೆಯು
ಸ್ನೇಹಕೆಂದು ನೀವೇ ಸಿಂಧು
ಎಂದು ನಿಮ್ಮಂದ ಸಾರಿದೆ

ಬಿರಿದ ಹೂವು ಬಿಂದುವಾಗಿ ಜೇನಿನೊಡಲಲಿ
ಬಂದಿಯಾಯ್ತು ಮಧುವೆಂಬ ಮಮತೆಯಿಂದಲಿ
ದುಂಬಿ ಬಿಂದು ಬಂದಿಯಾಗಿ ಮಧುವು ಮೆರೆಯಿತು
ಮಕರಂದವಿದು ಮರೆಯಾಯ್ತು ಮಧುವಿನಂದದಿ.

Thursday, December 1, 2022

ನಾಗನ ಪೂಜೆ

ನನ್ನಾಕೆಯ ಆಸೆಗೆ ನಾವಿಕನಾಗಿ
ಸಾಗಿತು ಪಯಣ ನಾಗನ ಪೂಜೆಗೆ

ಹುತ್ತದ ಸುತ್ತಲೂ ಹಣ್ಣಿನ ರಾಶಿ
ಹಾಲು ಹರಿದಿದೆ ಝರಿಯಾಗಿ
ಹೂವಿನ ಹಂದರದೊಳದೊಳಗೇ

ಮಮ್ಮಲ ಮರುಗಿದ ಮನಸು ಕೂಗಿತು
ಪೂಜೆಯನಂತರ ಆರತಿಯೆತ್ತಿ
ಕಂದಗೂ, ಕರುವಿಗೋ ಹಾಲುತುಪ್ಪ
ಹಣ್ಣು ಹಸಿದವಗೆ  ಹಂಚಬಹುದಿತ್ತು

Saturday, November 26, 2022

ಪುರಷನೆಂಬ ಪೌರುಷದಲಿ

ಪುರಷನೆಂಬ ಪೌರುಷದಲಿ
ಪ್ರಶಾಂತತೆಯು ನಿನಗಿಲ್ಲ
ಮನೆ, ಮಡದಿ ಮಕ್ಕಳ ನೆನಪಲ್ಲಿ
ತ್ಯಾಗವೇ ನಿನದೆಲ್ಲ

ಗಂಡೆಂಬ ಗಂಡಾಂತರದಲಿ
ನಗುವಿಲ್ಲ ನಲಿವಿಲ್ಲ
ಹಗುರಾದ ಮನವಿಲ್ಲ

ದುಡಿದಣಿದು ದುತ್ತೆಂದು ಬರುವಾಗ
ದುಂಬಾಲು ಬೀಳಲಿಲ್ಲ
ಖುಷಿಯೊಂದ ನೀತಂದೆ
ಮನೆಮಂದಿಗೆಲ್ಲ

ತ್ಯಾಗಕ್ಕೆ ಹೆಣ್ಣೆಂದು ನೀ ಬರೆದೆಯಲ್ಲ
ನಿನ ನೋವಿಗೆ ನೀ
ಅಕ್ಷರ ರೂಪವ ಕೊಡಲೇ ಇಲ್ಲ

ಮರುಮಾತನಾಡದೆ 
ನುಂಗಿದೆ ಮನದಲ್ಲಿ ಎಲ್ಲ
ನಗುವೆಂಬ ಔಷದಿಯ ನೀ ಮರೆತು
ರೋಗರುಜಿನಗಳಿಗೆ ತುತ್ತಾದೆಯಲ್ಲ

ಮರೆಯದಿರು ಮನವ ಹಗುರಾಗಿಸಲು
ಮರೆತು ನೂರಾರು ಚಿಂತೆ
ಬಾಳು ಬೆಳಗಲಿ ಬೆಳದಿಂಗಳಂತೆ

- ಪ್ರಸಾದ್ ಟಿ ಎಮ್

Thursday, November 24, 2022

ಮಂದಹಾಸದ ಮುಗುಳುನಗೆ

ಇರಲಿ ಮೊಗದಲಿ
ಮಂದಹಾಸದ ಮುಗುಳುನಗೆಯೊಂದು
ಇದುವೇ ಅವಿಸ್ಮರಣೀಯ ಆಭರಣ
ಆತ್ಮವಿಶ್ವಾಸದ ಹೊಂಗಿರಣ

ಮರೆತು ಮರುಗದಿರು
ಮಗುಮೊಗದ ಮಂದಹಾಸ
ಬಾಳಿಗಿದು ಚಂದ್ರಹಾಸ
ಇದನರಿತು ಹರನಂತಿರು 

ನಗುಮೊಗದ ಮೊಗಶಾಲೆ
ಗೆಲುವಿಗಿದು ಪಾಠಶಾಲೆ
ಬಿದ್ದೆದು ಗೆದ್ದಮೇಲು ಇರಲಿ ಮೊಗದಲಿ
ಮಂದಹಾಸದ ಮುಗುಳುನಗೆಯೊಂದು

ನೀಲ ನಕ್ಷತ್ರ

ನೀಲ ನಕ್ಷತ್ರ 
ಮಿನುಗಲೇಕೆ ಮುನಿಸು
ಮಿನುಮಿನುಗಿ
ನನ್ನೆದೆಯ ದಾಹವ ತಣಿಸು 

ಒಂಟಿಯೆಂದೆಣಿಸದಿರು 
ಬಂದಿಹೆನು ಬಂದುವಾಗಿ
ಬರವಿರದೆ ಬಳಲಿರದೆ
ಬಾಳುಬೆಳಗಲಿ ನೀಲ ನಕ್ಷತ್ರದ ಬೆಳಕಳಿ

Wednesday, November 23, 2022

ಬರವಿದೆ ಪದಗಳಿಗೆ

ಬರೆಯಲೊಪ್ಪಿದೆನು
ಬರವಿದೆ ಪದಗಳಿಗೆ

ಬಣ್ಣಿಸಲೆಣಿಸಿದೆ
ಭಾಮಿನಿಯ ಬಿಸಿಯುಸಿರ

ಬಣ್ಣಿಸಲಾಗದೆ ಸೋತಿಯೆನು 
ಬಾಂಧವ್ಯದ ಬಣ್ಣನೆಯ

ನೀ ಬೆಳೆಸಲಿಲ್ಲ

ನೀ ಬೆಳೆಸಲಿಲ್ಲ,
ನಾ ಬೆಳಗಿದೆ...
ನೀ ತುಳಿದೆ,
ನಾ ತಳೆದೆ ಮೂರ್ತರೂಪ...

ಪ್ರಸಾದನ ಪ್ರಾರ್ಥನೆ

ಕನ್ನಡಾಂಬೆಯ ಪಾದಾರವಿಂದಗಳಲ್ಲಿ!

ನಿದ್ರೆಯ ನೈವೇದ್ಯೆಗೈದು 
ನಿನ್ನ ಸೇವೆಯ ಮಾಡಿರುವೆ
ಹರಸು ತಾಯೆ,
ನಮ್ಮಿಪ್ರಯತ್ನಕ್ಕೆ
ಮೂಡದಂತಿರಲಿ
ಯಾವುದೇ ಕಪ್ಪು ಛಾಯೆ

ಮಳೆರಾಯ!

ಮಂಕಾಗದಿರಲಿ ದಿನ-ಮನ
ಮೋಡ-ಮಳೆಯ ಮುತ್ತುಗಳಿಂದ
ಬಿಡುವಿರಲಿ ನಿನ್ನ 
ದಣಿವರಿಯದ ದಿನಚರಿಗಳಿಗೆ

ಸೂರ್ಯ!

ಸೂರ್ಯ ರಶ್ಮಿಯ ಹೊಳೆ
ತೊಳೆದಂತಿರಲಿ ಇಳೆ 
ಮೇಳೈಸುತಿರೆ
ಸಾಹಿತ್ಯ ಬಂದುಬಳಗ

ಸಾಹಿತ್ಯ ಸೇತು - ಕಿರು ಕವಿಗೋಷ್ಠಿ

ಇದು ಬಂದವೋ, ಭಕ್ತಿಯೊ 
ಬಂದಿಸಿದೆ ಎನ್ನ
ನಿಮ್ಮ ಸ್ನೇಹ ಪ್ರೀತಿಗಳಲ್ಲಿ

ಮುಗಿಯುತ್ತದೆ ಮನದ ಬೇಗೆ
ಮಾಗುತ್ತದೆ ಮನಸು
ಮುರಿಯದಿರಲಿ 
ಈ ಮಧುರ ಬಾಂಧವ್ಯ

ಅತ್ಯಾಪ್ತತೆಯ
ಆನಂದ ಅನುಭವಿಸಿದೆ
ಅನುರಣಿಸಲಿ ಅನುದಿನವೂ
ಈ ಸ್ನೆಹಬಂದ

Tuesday, November 15, 2022

ಪ್ರಸಾದನ ಪ್ರಣಾಮಗಳು

ನೀವೆನ್ನ ಸಲಹಿದಿರಿ
ನಾನೆಲ್ಲ ಸಹಿಸಿದೆನು
ನಾವೆಲ್ಲ ಶ್ರಮಿಸಿದೆವು
ಸಾಹಿತ್ಯದಾಶಕ್ತಿ ಸಂಘಟಿಸಿರುವದು ನಮ್ಮೆಲ್ಲರ 

ಪ್ರಶಸ್ತಿ ಪ್ರಶಂಸೆಯಿಂದಾಚೆಗೆ ಬರೆದಿರಿ
ಪೊರೆವಂತೆ ಕಿರು ಕವಿಗೋಷ್ಠಿಯನ್ನ
ತಮ್ಮೆಲ್ಲರ  ಅಮೃತಾಕ್ಷರದಲ್ಲಿ
ಮೂಡಿಹುದು ಸಿರಿಧಾನ್ಯ ಸುಧೆ
ಸೃಷ್ಟಿಸಿರುವದು ಕಿರು ಕಾವ್ಯದಾಮೃತ

ಹೆಜ್ಜೆಗೆಜ್ಜೆಗೆ ಹೆಚ್ಚಿದ ಅನುಭವ 
ದೂಡಿಹುದು ದುಡಿಯಲು ಕಿರು ಸಿರಿಗಾಗಿ
ಸಿರಿಧಾನ್ಯ ಕಾವ್ಯಲಹರಿಗಾಗಿ
ಅಚ್ಚಳಿಯದುಳಿಯಲಿ ಇತಿಹಾಸ ಪುಟಗಳಲಿ
ನಮ್ಮೆಲ್ಲರ ಕಿರು ಕಾವ್ಯ ಸೇವೆ
ಮತ್ತೆ ತಮ್ಮೆಲ್ಲರ ಅಮೃತಾಕ್ಷರದಲಿ, ಎಲ್ಲೆಡೆ ಪಸರಿಸಲಿ

Tuesday, November 8, 2022

ಸಾವಯವ ಕೃಷಿ

ಸಾರಬೇಕಿದೆ ನಾವು ಸಾವಯವ ತತ್ವ
ಬೇಸಾಯದಿ ಪಾಲಿಸೋಣ ಸಾವಯವ ಸತ್ವ
 
ಮಾಡಬೇಕಿದೆ ದೃಢ ಸಂಕಲ್ಪ
ಉಣಿಸದಿರಲು ಭೂತಾಯಿಗೆ ವಿಷವನು ಅಲ್ಪ
 
ಮರೆತರಂತು ಮಣ್ಣಿನ ಇತಿಹಾಸ
ಸೃಷ್ಟಿಸಲಾಗದು ಮನುಜಮೊಗದಲ್ಲಿ ಮಂದಹಾಸ
 
ಸವಕಳಿ ತಡೆಯಲು ಬದು ನಿರ್ಮಾಣ
ಬದುವಿಲ್ಲದ ಹೊಲ-ಗದ್ದೆಗಳವು ಅಂತರ್ಜಲಕ್ಕೆ ನಿರ್ಯಾಣ
 
ಮಾರಕ ಕೀಟನಾಶಕಗಳು, ರಸಗೊಬ್ಬರಗಳವು ಅಧಿಕ ಖರ್ಚಿಗೆ ದಾರಿ
ಪಾಲಿಸೋಣ ಸಾವಯವ ಸತ್ವ ಆಗದು ಬೇಸಾಯ ದುಭಾರಿ
 
ಸಾವಯವ ಕೃಷಿಯದು ದುಡಿವುದು ಮಣ್ಣಿನ ಬಲವರ್ಧನೆಗೆ
ಬಹು ಬೇಡಿಕೆ ಇರುವುದು ಸಾವಯವ ಬೆಳೆಗಳಿಗೆ
 
ತರಗೆಲೆ, ಕಳೆಗಿಡ ಭೂಮಿಗೆ ಗೊಬ್ಬರ
ಹಾಕದಿರು ನೀ ಮಣ್ಣಲಿ ಕರಗದಿಹ ರಸಗೊಬ್ಬರ
 
ಯುವ ರೈತರೆಲ್ಲರೂ ಮಾಡಬೇಕಿದೆ ದೃಢ ಸಂಕಲ್ಪ
ಉಣಿಸದಿರಲು ಭೂತಾಯಿಗೆ ವಿಷವನು ಅಲ್ಪ

Sunday, November 6, 2022

ಜ್ಞಾನ ದೀವಿಗೆ

ಜ್ಞಾನ ದೀವಿಗೆ ಇದು ಹಣತೆಯಂತೆ,
ಹಳತಾದರೇನು ಹೊಸತಾದರೇನು,
ನೀಡುವ ಸುಜ್ಞಾನ ಭೋದವಂದೆ! 

ಹಳತೆಂದು ಅನ್ನದಿರು,
ಅದು ಅನುಭವದ ಕಂತೆ,
ಹಳತಾಗಿರುವುದು ಜ್ಞಾನಸುಧೆ  ಹರಿಸಿದಂತೆ!

ಇರಲಿ ಮನೆ ಮನಗಳಲ್ಲಿ,
ಪುಸ್ತಕದ ಮೇಜು, 
ಅದುವೇ ಸುಜ್ಞಾನದ  ಮೋಜು!

Wednesday, October 26, 2022

ಬೆಳಕಿನಾಚರಣೆಯ ಬಿರುಸು ಬೆಂಕಿಯಲ್ಲಿ ಬೆಂದಿದೆ

ಕೇಳದಾಗಿದೆ ಪ್ರಕೃತಿ ಮಾತೆಯ ಆರ್ತನಾದ
ಈ ಸದ್ದು ಗದ್ದಲಗಳಲ್ಲಿ
ಪಟಾಕಿಯ ಸದ್ದು ಗದ್ದಲಗಳಲ್ಲಿ

ಹೃದಯಗಳೀಗ ಕಂಪಿಸುತ್ತಿವೆ
ಇಂಗಾಲ ತುಂಬಿದೆ ಗಾಳಿಯಿಂದಾಗಿ
ಮತ್ತದೇ ಮನು ಕುಲದ ಆರ್ತನಾದ
ಕೇಳದಾಗಿದೆ ಈ ಪಟಾಕಿಯ ಸದ್ದು ಗದ್ದಲಗಳಲ್ಲಿ

Saturday, October 22, 2022

ಸಹನೆ

ಸಹನೆ ನನದಿರಬಹುದು, ಸಹಿಸಲೇಕೆ ನಿನ್ನ
ಪ್ರೀತಿಯಿಂದ ಧಾರೆಯೆರೆದದ್ದು ಎನ್ನ ಕನಸನ್ನ
ಸಹನೆಯಿಂದ ವಿಕಸನಗೊಳಿಸಿದ್ದು ನೂರಾರು ಹೃದಯಗಳನ್ನ
ವ್ಯಕ್ತಿತ್ವದಿಂದಾಚೆಯ ಹೋಲಿಕೆಯದು ಗುನ್ನ
ನಿರ್ದರಿಸಿಯೇ ಆಯಿತು, ಇಲ್ಲಿಂದ ಕಾಲ್ಕಿಳುವುದೇ ಚೆನ್ನ
ಇಲ್ಲಿಂದ ಕಾಲ್ಕಿಳುವುದೇ ಚೆನ್ನ...

Wednesday, October 12, 2022

ಸಿರಿಧಾನ್ಯ - ನಾನು ಯಾರು

ನಾನು ಯಾರು ಬಲ್ಲೆಯೇನು
ಆರೋಗ್ಯದ ಸಿರಿಯು ನಾನು
ಪ್ರೋಟೀನು ಐರನ್ನು ಕ್ಯಾಲ್ಸಿಯಂ ಕಣಜ ನಾನು
ಅಕ್ಕಿ ಗೋದಿ ಮೈದಕ್ಕೆ ಬದಲಿ ನಾನು
ಹಿರಿಯ ಸಿರಿಯ ಸಿರಿಧಾನ್ಯ ನಾನು

ಸಮತೋಲನ ಆಹಾರದ ಸರದಾರನು 
ಪಾರ್ಶ್ವವಾಯು, ರಕ್ತದೊತ್ತಡ, ಮಧುಮೇಹಕ್ಕೆ ಮದ್ದಲ್ಲವೇನು
ಕಡಿಮೆ ಕ್ಯಾಲೋರಿ, ರೋಗ ನಿರೋಧಕ ಶಕ್ತಿನೀಡುವೆನು
ಸಿರಿಯ ಹಿರಿಯ ಸಿರಿಧಾನ್ಯ ಸೇವನೆ ಅವಶ್ಯವಲ್ಲವೇನು 

ನೀರ ಬವಣೆ ನೀಗುವೆನು
ಬಿಸಿಲು ಬರ ಶಾಖ ತಟ್ಟದೆನ್ನನು
ಪರಿಸರ ಪೋಷಕನು ನಾನು
ಭೂ ಒಡಲ ಬರಿದಾಗಿಸೆನು
ಮನುಜ, ಮಣ್ಣು ರಕ್ಷಕ ನಾನಲ್ಲವೇನು
ಹಿರಿಯ ಸಿರಿಯ ಸಿರಿಧಾನ್ಯ ನಾನು

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...