Wednesday, November 23, 2022

ಪ್ರಸಾದನ ಪ್ರಾರ್ಥನೆ

ಕನ್ನಡಾಂಬೆಯ ಪಾದಾರವಿಂದಗಳಲ್ಲಿ!

ನಿದ್ರೆಯ ನೈವೇದ್ಯೆಗೈದು 
ನಿನ್ನ ಸೇವೆಯ ಮಾಡಿರುವೆ
ಹರಸು ತಾಯೆ,
ನಮ್ಮಿಪ್ರಯತ್ನಕ್ಕೆ
ಮೂಡದಂತಿರಲಿ
ಯಾವುದೇ ಕಪ್ಪು ಛಾಯೆ

ಮಳೆರಾಯ!

ಮಂಕಾಗದಿರಲಿ ದಿನ-ಮನ
ಮೋಡ-ಮಳೆಯ ಮುತ್ತುಗಳಿಂದ
ಬಿಡುವಿರಲಿ ನಿನ್ನ 
ದಣಿವರಿಯದ ದಿನಚರಿಗಳಿಗೆ

ಸೂರ್ಯ!

ಸೂರ್ಯ ರಶ್ಮಿಯ ಹೊಳೆ
ತೊಳೆದಂತಿರಲಿ ಇಳೆ 
ಮೇಳೈಸುತಿರೆ
ಸಾಹಿತ್ಯ ಬಂದುಬಳಗ

No comments:

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...