Sunday, March 26, 2023

ಭರವಸೆ, ಗ್ಯಾರಂಟಿ, ಪರಿಹಾರದ ಮೋಹವೆಲ್ಲಿ!!!


ಬಿಜೆಪಿ ಎಂದಿತು ಭರವಸೆ
ಕಾಂಗ್ರೆಸ್ ಎಂದಿತು ಗ್ಯಾರಂಟಿ 
ಜೆಡಿಎಸ್ ಎಂದಿತು ಪರಿಹಾರ

ಭರವಸೆ, ಗ್ಯಾರಂಟಿ, ಪರಿಹಾರ ಬದಿಗಿರಲಿ!!!
ಎಣಿಸಿದ್ದೀರಾ  ಸಮಾವೇಶಗಳಿಂದಾಗುವ 
ಅನಾನುಕೂಲ, ಟ್ರಾಫಿಕ್ ಕಿರಿಕಿರಿ, ವಾಯುಮಾಲಿನ್ಯ...

ಭರವಸೆ, ಗ್ಯಾರಂಟಿ, ಪರಿಹಾರದ ಮೋಹವೆಲ್ಲಿ!!!
ಬದಲಾವಣೆಯಾ ಭಾವನೆಯು ಇಲ್ಲದ ನಿಮ್ಮಿಂದ!!!

ಕ್ಷಮೆಇರಲಿ, ಸಮ್ಮತಿಯೂ ಇರಲಾರದು
ಪ್ರಜ್ಞಾವಂತ  ಮತದಾರನಿಂದ...

Thursday, March 9, 2023

ಗೆಲ್ಲಲೊರಟ ಮನಕೆ

ಬಿದ್ದ ಬೀಜದ ಮೊಳಕೆ
ಹೊಸ ಜೀವಕ್ಕೆ ಒರತೆ
ಚಿಗುರೊಂದು ಹಸಿರಿಗೆ ನಾಂದಿ

ಬರಡಿರಲಿ ಬಿಸಿಲಿರಲಿ
ಬದುಕು ಹಸನಿರಲಿ
ಮೊಳಕೆ-ಚಿಗುರಗಳ ಕನಸುಗಳು ಮೇಳೈಸುತಿರಲಿ

ಗೆಲ್ಲಲೊರಟ ಮನಕೆ
ಬರ ಬಿಸಿಲು ತಂಪಾಗಿ
ಒಣ ಕೊರಡು ಚಿಗುರೊಡೆದು ಆಶಿಸುವುದು ಕಾಣ

Wednesday, March 8, 2023

ಮಹಿಳೆಯೆಂಬ ಮಹಾ ಮಹಿಮೆಗೆ

ಸೃಷ್ಟಿಯ ಸೆಲೆ ನೀನು
ಸ್ಪೂರ್ತಿಯ ಅಲೆ ನೀನು
ತ್ಯಾಗದ ನೆಲೆ ನೀನು
ಬರಡಾದ ಬದುಕ ಬೆಳೆಗುವ ಹಣತೆಯು ನೀನು

ತಾಯಿ-ತಂಗಿ, ಗೆಳತಿ-ಒಡತಿ
ನಿನ್ನದಪಾರ ರೂಪ
ಶಕ್ತಿ-ಸೃಷ್ಟಿ ನಿನ್ನೆರಡು ದೃಷ್ಟಿ
ಬೆಳಗುತಿರಲಿ ನಿನ್ನ ಬಾಳ ನೌಕೆ

ಮಹಿಳೆಯೆಂಬ ಮಹಾ ಮಹಿಮೆಗೆ, ಮಹಿಳಾ ದಿನಾಚರಣೆಯ ಶುಭಾಶಯಗಳು

Friday, March 3, 2023

ಸೋಲು - ಗೆಲುವು

ಸೋಲೊಂದು ಬಾಯಿಬಡುಕ
ಮುಗ್ಗರಿಸಿದೊಡನೆಯೇ 
ಮುನ್ನುಗ್ಗಿ ಮನೆ ಮಾತಾಗುತ್ತದೆ

ಗೆಲುವೊಂದು ಗೌಣ
ಬಚ್ಚಬಾಯಿಯ ಏಕಾಂಗಿ
ತನ್ನೊಡಲ ಎಣ್ಣೆಹೊಯ್ದು 
ಹಚ್ಚಿದ ದೀಪ 
ಹೆಚ್ಚೆಂದು ಹೇಳಲರಿಯದ ಎಳವ

ಸೋಲಿಗೆ ಸೊಲ್ಲೆತ್ತಿ 
ಸುಳ್ಳೇ ನುಡಿವ ಎಲೆ ಮನವೇ
ಗುದ್ದಾಡಿ ಗೆಲ್ಲುವ ಗೆಳೆಯರಿಗೆ
ಗದ್ಗದಿಸದೆ ಹರಸಿ ಆಸರೆಯಾಗಲಾರೆಯ???

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...