Sunday, January 15, 2023

ಸಂಕ್ರಾಂತಿಯಂದರೇ...

ಸುಗ್ಗಿಯ ಸಂಭ್ರಮ
ಬೆಳೆಗಳ ಒಪ್ಪ-ಓರಣ
ಮನೆ ಮೆದೆಗಳಿಗೆ ತಳಿರು ತೋರಣ
ಮಾವು, ನೇರಳೆ, ಹಲಸು, ಅಂಕೋಲೆಯ ಅಲಂಕಾರ

ಹೊನ್ನೆ, ಉಗನಿ, ತುಂಬಿ, ಅಣ್ಣೆಹೂಗಳ ಸೇರಿಸಿ 
ಕೊಟ್ಟಿಗೆಯನಲಂಕರಿಸಿ
ರಾಸುಗಳ ಪೂಜಿಸಿ
ದುಡಿದು ದಣಿದ ದನಕರುಗಳ ಗೌರವಿಸಿ

ಕೊರಳಿಗೆ ಘಂಟೆ, ಕೊಂಬಿಗೆ ಕಳಸ
ಅಂದಚಂದದಿ ಸಿಂಗರಿಸಿ
ಕಿಚ್ಚಾರಲೊರಟ ರಾಸುಗಳೇ 
ನಮ್ಮ ಹಳ್ಳಿಗಳ್ಳಿಗೆ ಅಲಂಕಾರ 

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...