Sunday, December 17, 2023

ಬೆಳೆದು ಬೆಳಕಾಗುವ

ನಾವೊಂದು ಹೆಮ್ಮರದ ನೆರಳು
ಬಾಹುಬಲ ಚಾಚಬೇಕಿದೆ ಬುಡದಿಂದಲೇ
ಬೇರಬಿಡದೆ ಭುವಿಯ ಸುತ್ತುವರಿಯಲು 

ಚಿಮ್ಮಿ ಬಿರಿದು ಬೆಳೆದ ಬಂಧುಗಳು
ಬುಡ ಬಿಟ್ಟರೆಂತು
ಮರನಿಂತಿತೇ ನೆರಳಿಲ್ಲದೆ

ಈಗೀಗ, ಮರ ಬೇಡಿದೆ ಆಸರೆಯ
ಅರಿವಿನಾಸರೆಯ, ಬೆಳಕಿನಾಸೆರೆಯ
ಬುಡಬಿಡದೆ ಬೆಳೆದು ನಿಲ್ಲುವವರಾಸರೆಯ

ಮರ ಮರುಗದಿರಲಿ
ಮನ ಬೆಳಗುತಿರಲಿ
ಅರಿವು ಅಂತರವ ತರದಿರಲಿ

ಅರಿತು ಮರೆಯಾಗದೆ
ಬೆಳೆದು ಬೆಳಕಾಗುವ
ಮರದ ಬುಡಬಿಡದೆ ಬೆಳೆದು ಬೆಳಕಾಗುವ

Sunday, December 10, 2023

ಹಸಿವನೀಗ್ಯಾವ

ಕಲ್ಲು ಸವೆದಾವ
ಕುಡುಗೋಲು ಸವೆದಾವ
ಬೆನ್ನ ಮೂಳೆಯೂ ಸವೆದಾವ
ಕಷ್ಟದೊಳು ಕನಸುಗಳೂ ಸವೆದಾವ

ಸೋತರು ಬಿಡಲೊಲ್ಲೆನೆಂಬ ಛಲ ಬೆಳೆದಾವ
ಆ ಛಲದಿಂದ ಹೊಲದಾಗ ಬೆಳೆ ಬೆಳೆದಾವ
ಹಸಿರು ತೆನೆ ತೆನೆದು ಹಸಿವನೀಗ್ಯಾವ
ಜಗದಸಿವ ನೀಗ್ಯಾವ

Wednesday, December 6, 2023

ಅರಿಯೋಣ ಅಕ್ಕರೆಯ ಅಂತರಂಗವೊಂದ

ಸೃಷ್ಟಿಯ ಸೆಲೆ ನೀನು
ಸ್ಪೂರ್ತಿಯ ಅಲೆ ನೀನು
ತ್ಯಾಗದ ನೆಲೆ ನೀನು
ಬರಡಾದ ಬದುಕ ಬೆಳೆಗುವ ಹಣತೆಯು ನೀನು
 
ಅರಿತವರುಂಟೆ ನಿನ್ನಂತರಾಳ
ಅದು ಸಾಗರದಾಳ
ನಡೆದಿವುದು ಅಲ್ಲಿ ಭಾವ-ಬೆಸುಗೆಗಳ ಮೇಳ
ಬೀಳದಿರಲಿ ನಿನ್ನಕನಸುಗಳಿಗೆ ಕೋಳ
 
ಅರಿತೆವೆಂದು ಹಟ್ಟಹತ್ತಿಸಿದವರು
ಅರಿವಿಲ್ಲದ ಅಂದರು
ಅರಿಯದೆ ಅಸುಳೆಗಳ ಕೊಂದರು
ನೀ ಅವರ ಕೈಗೆ ಸಿಗದಿರು
 
ತಾಯಿ-ತಂಗಿ, ಗೆಳತಿ-ಒಡತಿ
ನಿನ್ನದಪಾರ ರೂಪ
ಶಕ್ತಿ-ಸೃಷ್ಟಿ ನಿನ್ನೆರಡು ದೃಷ್ಟಿ
ಸಿಗುತಿರಲಿ ನಿನ್ನ ಬೆಳವಣಿಗಿಗೆ ಪುಷ್ಟಿ

Tuesday, December 5, 2023

ನಾವು!

ನಿಯತ್ತಿನ ನೊಗಹೊತ್ತವರು
ದುಡಿದು ದಣಿಯಲೇಬೇಕಿರುವವರು
ಗೆಲುವೊಂದ ಕಾಣಲು, ಸಾವಿರ ಸಲ ಸೋತವರು
ಬದುಕಿನ ಮೈಲುಗಲ್ಲುಗಳ ಮಗ್ಗಿಲಲಿ ಮೈಕೊಡವಿ ನಿಂತವರು

ಅವಕಾಶ ವಂಚಿತರು
ಪ್ರಭಾವಿಗಳ ಪವಾಡ ಪಡೆಯದಾದವರು
ಪ್ರಯತ್ನವೆಂಬ ಪ್ರಯಾಣದಲಿ ಒಂಟಿಯಾದವರು
ಬಿದ್ದೆದ್ದು ಗೆದ್ದಾಗ ಬೆನ್ನುತಟ್ಟುವವರು ಇಲ್ಲದವರು

ಸೋಲುಗಳ ಸರಮಾಲೆ ಹೊತ್ತವರು
ಸೋಲ ಸೊಲ್ಲಡಗಿಸಿ ಸೆಟೆದುನಿಂತವರು
ಅನುಭವದಿ ಹರಿತವಾದವರು
ನಾವು, ಸೋಲುಂಡು ಗೆಲ್ಲುವವರು

ನಾ ರೈತ

ನೀ ಪಿಸುಗುಡಲು, ನಾ ದನಿ
ನೀ ನಲಿಯಲು, ನಾ ನಾದ
ನೀ ಕಂಪಿಸಲು, ನಾ ಕಣ್ಣೀರು
ನೀ ಚಿಗುರಲು, ನಾ ಚಿಗರೆ
ನೀ ಕೈಹಿಡಿದರೆ, ನಾ ಕಂದ
ನೀ ಬೆಳೆಯಲು, ನಾ ಬಂಗಾರ
ನೀ ಬಿರಿಯಲು, ನಾ ಬೆದರುಬೊಂಬೆ
ನೀ ಮಣಿಯಲು, ನಾ ಮಣ್ಣು

Wednesday, November 22, 2023

ಯುವ ಸಮೂಹ ಪುಸಕ ಗಳನ್ನು ಓದುವ ರೀತಿ ಮನಸ್ಸುಮೂಡಿಸ್ಸವುದು ಹೇಗೆ

 ಹಿರಿಯರು -
 
ತಿಳಿಹೇಳಬೇಕಿದೆ ನಾವು "ಓದು" ಕರ್ತವ್ಯವಲ್ಲವೆಂದು
ಪ್ರಸ್ತುತಪಡಿಸಬೇಕಿದೆ ನಾವು "ಓದು" ಉಡುಗೊರೆಯಂದು
 
ಅರಿವ ಪಸರಿಸಬೇಕಿದೆ ಇಂದಿನೋದುಗನೆ ನಾಳೆಯ ನಾಯಕ
ತಿಳಿಸಬೇಕಿದೆ ಪುಸ್ತಕಗಳೋದಿದ ಯುವಶಕ್ತಿಯೇ ದೇಶದ ನಾವಿಕ
 
ನೀಡಬೇಕಿದೆ ನಾವು ರುಚಿಸುವ ಪುಸ್ತಕವ
ಬಲಪಡಿಸಲು ಯುವಶಕ್ತಿಯ ಮಸ್ತಕವ
 
ಯುವಕರು –
 
ಪುಸ್ತಕಗಳಿವು ಆತ್ಮದಸಿವಿಗೆ ಆಹಾರ
ಓದಿದರೆ ನೀ-ಗಳಿಸುವುದಿದೆ ಅಪಾರ
 
ಓದಬೇಕಿದೆ ನಾವು ಪಠ್ಯದಿಂದಾಚೆಗೂ
ಸಿಕ್ಕಿ-ಬೀಳದಿರಲು ದೈಹಿಕ-ಮಾನಸಿಕ ಒತ್ತಡದ ಗೋಚಿಗೂ
 
ಪುಸ್ತಕದ ಪುಟಗಳಲ್ಲಿದೆ ಅಸಾಧಾರಣ ಶಕ್ತಿ
ತಿಳಿದರೆ ನೀ ಪಡೆವೆ ನಾಯಕನ ಯುಕ್ತಿ
 
ಪುಸ್ತಕಗಳಿವೋ ನಿನ್ನೊಡಲ ಸಲಹೆಗಾರ
ಅರಿತರೆ ನೀ ಸೋಲಿಲ್ಲದ ಸರದಾರ!!!

Monday, November 13, 2023

ಹಚ್ಚಬೇಕಿದೆ ನಾವು "ಬದುಕೆಂಬ ಬೆಳಕ ದೀಪ"

ಕತ್ತಲೆಂದು ಕೊರಗದಿರಲು
ಕಷ್ಟವೆಂದು ಸೊರಗದಿರಲು
ಬಳಲಿದೆನೆಂದು ಬೆದರದಿರಲು
ಬೆಳೆಯಲಾರನೆಂದು ಬಂದಿಯಾಗದಿರಲು
ಬದುಕು ನಿನದೆ ನೀನದರ ಬೆಂಬತ್ತಿರಲು

Friday, November 3, 2023

ಹಚ್ಚಬೇಕಿದೆ ನಾವು "ದೀಪ"

ಆತ್ಮಸಾಕ್ಷಾತ್ಕಾರಕ್ಕಾಗಿ
ಪ್ರಸನ್ನತೆಯ ಪ್ರಾಪ್ತಿಗಾಗಿ
ನಮ್ಮಾತ್ಮ ಜ್ಯೋತಿಯ ಮನನಕ್ಕಾಗಿ
ಮನು ಮನದ ಮಾನಸಿಕ ನೆಮ್ಮದಿಗಾಗಿ
ಮನುಕುಲದ ಪ್ರಾಣಶಕ್ತಿಯ ಸ್ಥಿರತೆಗಾಗಿ

ಮಹದಾಯಿಯ ಮಮತೆ ಇಲ್ಲ, ಕಾವೇರಿಯ ಕರುಣೆಯು ಇಲ್ಲ

ಮಾತೆ ಮಹದಾಯಿಯು ಇವಳು
ಹರಿವಳು ಕರ್ನಾಟಕ, ಮಹಾರಾಷ್ಟ್ರ, ಗೋವಾದೊಳು
ಅರಬ್ಬೀ ಸಮುದ್ರದ ಅಂತರಂಗದೊಳು ಇಳಿವಳು
 
ಕರುಣೆಯ ಕಾವೇರಿಯು ಇವಳು
ಹರಿವಳು ಕರ್ನಾಟಕ, ತಮಿಳುನಾಡಿನೊಳು
ಬಂಗಾಳ ಕೊಲ್ಲಿಯಲ್ಲಿ ಇಳಿವಳು
 
ಬಯಲ ಬೆಳೆಯ, ಕುಡಿವ ಕಂದನ ಬಾಯಾರಿಕೆಯನ್ನಾರಿಸಿ
ಕಬ್ಬು, ಭತ್ತ, ರಾಗಿ ಬೆಳೆಗಳ ಬೆಳೆಸಿ
ಖಗ ಮೃಗ ಕಾಡುಗಳ್ಳನ್ನರಳಿಸಿ
 
ಕರುನಾಡ ಕಂದಮ್ಮಗಳ ಮಾತೆಯರಿವರು
ಈಶ್ವರಿ ಸ್ವರೂಪದವರು
ಹರಿದು ಹಂಚಿ ವಿವಾದಕ್ಕೆ ಸಿಲುಕಿದವರು
 
ಕರುನಾಡ ಕಣ್ಗಳಿವರು
ಕರುಣೆಯಿಂದೆಮಗೆ ದೊರೆಯದಾಗಿಹರು
ಸ್ವಾರ್ಥ ನ್ಯಾಯದೀ ನೊಂದು ನಲಗಿಹರು
 
ಬರದ ಬೆಂಕಿಯಲಿ ಬೆಂದು
ಅನ್ಯಾಯದ ತೀರ್ಪುಗಳಲಿ ನೊಂದು
ತವರ ತೊರೆದಿಹರು ಇಂದು
 
ಕರುನಾಡಿನ ರೈತ ಕುವರರು ನಾವು
ಉಂಡಿವೆವು ಜಲ ನಿರ್ವಹಣಾ ಪ್ರಾಧಿಕಾರಗಳಿಟ್ಟ ಬೇವು
ಬೇಕಿದೆ ನಮಗೆ ಮಹದಾಯಿಯ ಮಮತೆ, ಕಾವೇರಿಯ ಕಾರುಣ್ಯವು

Friday, October 27, 2023

ಮಾಡಬೇಕಾಗಿದೆ ಸಾವಯವದೆಡೆಗೆ ಮುಖ

ಫಸಲ ಜೀವ ಹಿಂಡದಿರಲು
ಫಲವತ್ತತೆಯ ಕಸಿಯದಿರಲು
ಮಣ್ಣ ಮಲಿನಗೊಳಿಸದಿರಲು
ಜೀವಜಂತುಗಳ ಕೊಲ್ಲದಿರಲು
ಕೃಷಿಯ ಹೊರೆಯಾಗಿಸದಿರಲು
ನೀರ ನೆಲೆಗಳ ಕೊಳಕಾಗಿಸದಿರಲು
ಭುವಿಯ ಬರಡೆಂದು ದೂರದಿರಲು
ಹಸಿದುಣ್ಣವ ಅನ್ನದಲಿ ವಿಷವ ಸೇರಿಸದಿರಲು
ಮಾಡಬೇಕಾಗಿದೆ ನಾವು ಸಾವಯವದೆಡೆಗೆ ಮುಖ

ನಾವೇಕೆ ಸಾವಯವ ಕೃಷಿಯತ್ತ ಮುಖಮಾಡಬೇಕು...!!!

ಇತ್ತೀಚಿನ ದಿನಮಾನಗಳಲ್ಲಿ ಸಾವಯವ ಕೃಷಿಯು ಮನ್ನಣೆ ಮತ್ತು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎನ್ನುವುದು ಸಮಾಧಾನಕರ ವಿಷಯವಾದರೂ, ಇದರ ಜಾಗೃತಿ, ತಿಳುವಳಿಕೆ ಮತ್ತು ಅಳವಡಿಕೆಯು ಮಂದಗತಿಯಲ್ಲೇ ಸಾಗಿದೆ, ಆದರೂ ಯುವ ಸಮುದಾಯ ಸಾವಯವದತ್ತ ಮುಖ ಮಾಡಿರುವುದು ಸಮಾಧಾನಕರ ಸಂಗತಿಯೇ ಸರಿ. ಅಭಿವೃದ್ಧಿಯ ಹೆಸರಿನಲ್ಲಿ ಸಾಂಪ್ರದಾಯಿಕ ಕೃಷಿಯಿಂದ ಉಂಟಾಗುವ ಪರಿಸರ, ಆರೋಗ್ಯ ಮತ್ತು ಸುಸ್ಥಿರತೆಯ ಸವಾಲುಗಳ ಬಗ್ಗೆ ರೈತ ಸಮುದಾಯ ಇನ್ನೂ ಹೆಚ್ಚು ಜಾಗೃತವಾಗಬೇಕಾಗಿದೆ.

ಪರಿಸರ ಸಂರಕ್ಷಣೆ: ಸಾವಯವ ಕೃಷಿಯ ಅಗತ್ಯಕ್ಕೆ ಅತ್ಯಂತ ಬಲವಾದ ಕಾರಣವೆಂದರೆ ಪರಿಸರ ಸಂರಕ್ಷಣೆಯಲ್ಲಿ ಅದರ ಪಾತ್ರ. ಸಾಂಪ್ರದಾಯಿಕ ಕೃಷಿಯು ಸಾಮಾನ್ಯವಾಗಿ ಸಂಶ್ಲೇಷಿತ ಕೀಟನಾಶಕಗಳು, ಸಸ್ಯನಾಶಕಗಳು ಮತ್ತು ರಸಗೊಬ್ಬರಗಳ ಮೇಲೆ ಅವಲಂಬಿತವಾಗಿದೆ, ಇದು ಪರಿಸರದ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಉಂಟುಮಾಡುತ್ತದೆ. ರಾಸಾಯನಿಕಗಳು ನೀರಿನ ಮೂಲಗಳನ್ನು ಕಲುಷಿತಗೊಳಿಸುವುದಲ್ಲದೆ, ಮಣ್ಣಿನ ವಿನಾಶಕ್ಕೆ ಕಾರಣವು ಹೌದು. ಮತ್ತೊಂದೆಡೆ, ಸಾವಯವ ಕೃಷಿಯು ಬೆಳೆ ಸರದಿ, ಕವರ್ ಕ್ರಾಪಿಂಗ್ ಮತ್ತು ನೈಸರ್ಗಿಕ ಗೊಬ್ಬರಗಳ ಬಳಕೆಯಂತಹ ಅಭ್ಯಾಸಗಳನ್ನು ಪ್ರೋತ್ಸಾಹಿಸಿ, ಪರಿಸರವನ್ನು ಸಂರಕ್ಷಣೆಯಲ್ಲಿ ಸಹಾಯ ಮಾಡುತ್ತದೆ.

ಮಣ್ಣಿನ ಆರೋಗ್ಯ ಮತ್ತು ಸುಸ್ಥಿರತೆ: ಆರೋಗ್ಯಕರ ಮಣ್ಣು ಕೃಷಿಯ ಅಡಿಪಾಯವಾಗಿದ್ದು, ಸಾವಯವ ಕೃಷಿ ಮಣ್ಣಿನ ಆರೋಗ್ಯಕ್ಕೆ ಆದ್ಯತೆ ನೀಡುತ್ತದೆ. ಮಣ್ಣಿನ ಮಲಿನತೆ ಮತ್ತು ಅಡಚಣೆಯನ್ನು ಕಡಿಮೆಗೊಳಿಸುವ ಮೂಲಕ, ಫಲವತ್ತತೆ ಮತ್ತು ಸುಸ್ಥಿರ ಮಣ್ಣಿನ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಆರೋಗ್ಯಕರ ಮಣ್ಣು ಬೆಳೆ ಉತ್ಪಾದಕತೆಯನ್ನು ಹೆಚ್ಚಿಸುವುದಲ್ಲದೆ ಭೂ ಸವೆತವನ್ನು ತಗ್ಗಿಸುತ್ತದೆ.

ಕಡಿಮೆಯಾದ ರಾಸಾಯನಿಕ ಉಳಿಕೆಗಳು: ಸಾಂಪ್ರದಾಯಿಕ ಕೃಷಿಯಲ್ಲಿ ಸಂಶ್ಲೇಷಿತ ರಾಸಾಯನಿಕಗಳ ಬಳಕೆಯು ಆಹಾರೋತ್ಪನ್ನಗಳಲ್ಲಿ ರಸಾಯನಿಕಗಳ ಸೇರಿಕೆ ಮತ್ತು ಉಳಿಕೆಗೆ ಕಾರಣವಾಗಿ, ಮಾನವನ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಸಾವಯವ ಕೃಷಿಯು ಸಂಶ್ಲೇಷಿತ ಕೀಟನಾಶಕಗಳು ಮತ್ತು ಸಸ್ಯನಾಶಕಗಳ ಬಳಕೆಯನ್ನು ನಿಷೇಧಿಸುತ್ತದೆ, ನಮ್ಮ ಆಹಾರದಲ್ಲಿ ರಾಸಾಯನಿಕ ಉಳಿಕೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಶುದ್ಧ ಮತ್ತು ಸುರಕ್ಷಿತ ಆಹಾರದ ಪ್ರಾಮುಖ್ಯತೆಯ ಬಗ್ಗೆ ಗ್ರಾಹಕರು ಹೆಚ್ಚು ಜಾಗೃತರಾಗುತ್ತಿರುವ ಜಗತ್ತಿನಲ್ಲಿ ಇದು  ನಿರ್ಣಾಯಕ ಪಾತ್ರವಹಿಸುತ್ತದೆ.

ಕಡಿಮೆ ಕೃಷಿ ಉತ್ಪಾದನಾ ವೆಚ್ಚ: ಸಾವಯವ ಕೃಷಿಯಲ್ಲಿ ಪಳೆಯುಳಿಕೆ ಆಧಾರಿತ ರಸಗೊಬ್ಬರಗಳು ಮತ್ತು ಸಂಶ್ಲೇಷಿತ ಕೀಟನಾಶಕಗಳನ್ನು ನಿಷೇಧಿಸುವುದರಿಂದ ಕೃಷಿ ಉತ್ಪಾದನಾ ವೆಚ್ಚವು ಕಡಿಮೆ ಯಾಗುತ್ತದೆ, ರಸಗೊಬ್ಬರಗಳ ಬಳಕೆ ನಿಷೇಧದಿಂದ ಮಣ್ಣಿನಲ್ಲಿ NPK ಮಟ್ಟವು ಸುಧಾರಿಸಿ ಬೆಳೆಗಳು ರೋಗಮುಕ್ತವಾಗಿ ರೈತ ಸಮುದಾಯ ಕೀಟನಾಶಕಗಳಿಗೆ ವ್ಯಹಿಸುವ ಹಣವು ಉಳಿಯುತ್ತದೆ.

ಜೀವವೈವಿಧ್ಯ ಮತ್ತು ಪರಿಸರ ಸಮತೋಲನ: ಸಾವಯವ ಕೃಷಿಯು ಸಾಂಪ್ರದಾಯಿಕ ಕೃಷಿಯಲ್ಲಿ ಸಾಮಾನ್ಯವಾದ ಏಕಬೆಳೆ ಪದ್ಧತಿಯನ್ನು ತಪ್ಪಿಸುವ ಮೂಲಕ ಜೀವವೈವಿಧ್ಯತೇ ಮತ್ತು ಪರಿಸರ ಸಮತೋಲನವನ್ನು ಉತ್ತೇಜಿಸುತ್ತದೆ. ಸುಸ್ಥಿರ ಹಾಗು ವೈವಿಧ್ಯಮಯ ಬೆಳೆಗಳನ್ನು ಬೆಳೆಯುವ ಮೂಲಕ ಪ್ರಯೋಜನಕಾರಿ ಜೀವರಾಶಿಗಳಿಗೆ ನೈಸರ್ಗಿಕ ಆವಾಸಸ್ಥಾನಗಳನ್ನು ಒದಗಿಸಿ ಪರಿಸರ ಸಮತೋಲನಕ್ಕೆ ಕಾರಣವಾಗುತ್ತದೆ

ಮಾನವ ಆರೋಗ್ಯ ಪ್ರಯೋಜನಗಳು: ಸಾವಯವ ಆಹಾರ ಉತ್ಪನ್ನಗಳು ರಾಸಾಯನಿಕ ಅವಶೇಷಗಳಿಂದ ಮುಕ್ತವಾಗಿ ಪೌಷ್ಟಿಕ ಆಹಾರವನ್ನು ಒದಗಿಸಿ, ಮನುಕುಲದ ಆರೋಗ್ಯ ಪುನಸ್ಚೇತನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಭವಿಷ್ಯದ ಪೀಳಿಗೆಗೆ ಸಮರ್ಥನೀಯತೆ: ಸಾವಯವ ಕೃಷಿಯು ಸುಸ್ಥಿರತೆಯ ತತ್ವಗಳ ಆಧಾರದ ಮೇಲಿದ್ದು ಕೃಷಿ ಭೂಮಿಯನ್ನು ಹಾನಿಗೊಳಿಸದೆ, ಮಣ್ಣಿನ ಸವಕಳಿಯನ್ನು ತಪ್ಪಿಸಿ, ಸತ್ವಯುತ ಮಣ್ಣನ್ನು ಭವಿಷ್ಯದ ಪೀಳಿಗೆಗೆ ನೀಡುವ ಮೂಲಕ ದೀರ್ಘಾವಧಿಯ ಕೃಷಿ ಕಾರ್ಯಸಾಧ್ಯತೆಗೆ ಅನುವು ಮಾಡಿಕೊಡುತ್ತದೆ.

ಸಾವಯವ ಕೃಷಿಯು, ಪ್ರಸಕ್ತ ರಾಸಾಯನಿಕಯುಕ್ತ ಕೃಷಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಸಮಗ್ರ ಪರಿಹಾರವನ್ನು ನೀಡುವುದಲ್ಲದೆ, ಹೆಚ್ಚು ಸಮರ್ಥನೀಯ, ಪರಿಸರ ಸ್ನೇಹಿ ಹಾಗು ಆರೋಗ್ಯಕರ ಭವಿಷ್ಯದ ಕಡೆಗೆ ನಮ್ಮನ್ನು ಮುನ್ನಡೆಸುತ್ತದೆ. ಸಾವಯವ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ, ನಾವು ಮಣ್ಣು ಮತ್ತು ಸಕಲ ಜೀವಜಂತುಗಳೊಂದಿಗೆ ಸಾಮರಸ್ಯದ ಸಹಬಾಳ್ವೆಯನ್ನು ರೂಡಿಸಿಕೊಂಡು, ಮುಂದಿನ ಪೀಳಿಗೆಗೆ ಉತ್ತಮ ಜಗತ್ತನ್ನು ನೀಡಿಹೋಗಬಹುದು.

Wednesday, September 6, 2023

ಬೆಳಕಿನೆಡೆಗೆ... ಬದುಕಿನೆಡೆಗೆ...

ಕತ್ತಲೆಂದು ಕೊರಗಿದೆಯಾ!
ಅದು ಬೆಳಕಿನೆಡೆಗೆ ಮುಖಮಾಡಿರುವ ದಾರಿಹೋಕ
 
ಕಷ್ಟವೆಂದು ಸೊರಗಿದೆಯಾ!
ಅದು ಸುಖದ ದಾರಿಹಿಡಿದಿರುವವಗೆ ಸಖ
 
ಬಳಲಿದೆನೆಂದು ಬಂದಿಯಾದೆಯಾ!
ಅದು ಯಾರದು ಬೆಳೆಯಲೊರಟ ನಿನ್ನ ತಡೆಯಾಕ

Tuesday, August 8, 2023

ದಂಧೆಯ ತಂದೆ ಆಸ್ಪತ್ರೆ

ಮಕ್ಕಳುಟ್ಟುತ್ತಿದ್ದವು
ಮನೆಯಲ್ಲಿ
ಮಾನವೀಯತೆಯೂ ಹುಟ್ಟುತ್ತಿತ್ತು

ಆಗುತ್ತಿದೆ ಜನನ
ಆಸ್ಪತ್ರೆಯಲ್ಲಿ
ಹುಟ್ಟುತ್ತಿದೆ ಆಸೆಬುರುಕತನ

ಮೋಸ, ದಗಾ, ಕಳ್ಳತನವೊ
ಆಗುತ್ತದೆ
ನಮಗರಿವಿಲ್ಲದಂತೆ 

ಆಸ್ಪತ್ರೆಯ ಅಪಹರಣವೋ
ಹಾಡುಹಗಲೇ
ಆದರೂ ನಾವು ಆರೋಗ್ಯದಂದರು

ಬದುಕಲೋ, ಬದುಕಿಸಲೋ 
ನಾವ್ ಬೆವರುತ್ತಿರಲು
ಅವ ಬಸಿಯುತ್ತಿರುವ

Wednesday, May 24, 2023

ಅನುಭವದ ಹಣತೆ

ಅನುಭವದ ಹಣತೆಯಿಲ್ಲದೆ
ಹತ್ತಿದೇಣಿಯ ಒದ್ದು
ಗೆದ್ದು ಬೀಗುವುದೆಂತೋ...?
ಖುದ್ದು ದುಡಿಯದ ಹೊರತು
ಗದ್ದುಗೆಯು ದೊರೆಯದು...!
ಮೈಕೊಡವಿ ಮೇಲೆಳದೆ
ಪಲಿಸದಾಶೀರ್ವಾದ...!

Tuesday, April 18, 2023

ಬಿಜೆಪಿಯ ದಾಳ

ಪ್ರತಿ ಚುನಾವಣೆಯಲ್ಲಿ
ಬಿಜೆಪಿಯು ಉರುಳಿಸುತ್ತಿತ್ತು
ಭಾವನಾತ್ಮನಕ ದಾಳ
ಈ ಬಾರಿ ಉರುಳಿಸುತ್ತಿದೆ
ಉರಿಯಾಳುಗಳ ಕೋಳ

ಗಮ್ಯದೆಡಗಿನ ಗಮನ

ಗಮ್ಯದೆಡಗಿರಲಿ ನೆಟ್ಟ ನೋಟ
ಇಷ್ಟ-ಕಷ್ಟ ಕೊಡದಿರಲಿ ಕಾಟ
ಗುರಿಯಮುಂದೆ ನೆಡೆಯದಿರಲಿ ಬೇರಾವ ಮಾಟ

ಗಮ್ಯ-ಗೆಲುವಿನ ದಾರಿಯಲಿ
ಶ್ರಮ ಮಾರಿಯಂತಿರಲಿ
ಭದ್ರ ಬುನಾದಿಯ ದೃಢತೆಯೊಂದು ನಿನ್ನಜೊತೆಯಲಿರಲಿ

ಶ್ರಮಹೊಂದೆ ಗೆಲುವಿನ ಯಾನ
ಉಳಿದೆಲ್ಲವೂ ಗೌನ
ದೃಢ ಸಂಕಲ್ಪಗಳು ಕಾಯುವುದು ಮಾನ

Sunday, March 26, 2023

ಭರವಸೆ, ಗ್ಯಾರಂಟಿ, ಪರಿಹಾರದ ಮೋಹವೆಲ್ಲಿ!!!


ಬಿಜೆಪಿ ಎಂದಿತು ಭರವಸೆ
ಕಾಂಗ್ರೆಸ್ ಎಂದಿತು ಗ್ಯಾರಂಟಿ 
ಜೆಡಿಎಸ್ ಎಂದಿತು ಪರಿಹಾರ

ಭರವಸೆ, ಗ್ಯಾರಂಟಿ, ಪರಿಹಾರ ಬದಿಗಿರಲಿ!!!
ಎಣಿಸಿದ್ದೀರಾ  ಸಮಾವೇಶಗಳಿಂದಾಗುವ 
ಅನಾನುಕೂಲ, ಟ್ರಾಫಿಕ್ ಕಿರಿಕಿರಿ, ವಾಯುಮಾಲಿನ್ಯ...

ಭರವಸೆ, ಗ್ಯಾರಂಟಿ, ಪರಿಹಾರದ ಮೋಹವೆಲ್ಲಿ!!!
ಬದಲಾವಣೆಯಾ ಭಾವನೆಯು ಇಲ್ಲದ ನಿಮ್ಮಿಂದ!!!

ಕ್ಷಮೆಇರಲಿ, ಸಮ್ಮತಿಯೂ ಇರಲಾರದು
ಪ್ರಜ್ಞಾವಂತ  ಮತದಾರನಿಂದ...

Thursday, March 9, 2023

ಗೆಲ್ಲಲೊರಟ ಮನಕೆ

ಬಿದ್ದ ಬೀಜದ ಮೊಳಕೆ
ಹೊಸ ಜೀವಕ್ಕೆ ಒರತೆ
ಚಿಗುರೊಂದು ಹಸಿರಿಗೆ ನಾಂದಿ

ಬರಡಿರಲಿ ಬಿಸಿಲಿರಲಿ
ಬದುಕು ಹಸನಿರಲಿ
ಮೊಳಕೆ-ಚಿಗುರಗಳ ಕನಸುಗಳು ಮೇಳೈಸುತಿರಲಿ

ಗೆಲ್ಲಲೊರಟ ಮನಕೆ
ಬರ ಬಿಸಿಲು ತಂಪಾಗಿ
ಒಣ ಕೊರಡು ಚಿಗುರೊಡೆದು ಆಶಿಸುವುದು ಕಾಣ

Wednesday, March 8, 2023

ಮಹಿಳೆಯೆಂಬ ಮಹಾ ಮಹಿಮೆಗೆ

ಸೃಷ್ಟಿಯ ಸೆಲೆ ನೀನು
ಸ್ಪೂರ್ತಿಯ ಅಲೆ ನೀನು
ತ್ಯಾಗದ ನೆಲೆ ನೀನು
ಬರಡಾದ ಬದುಕ ಬೆಳೆಗುವ ಹಣತೆಯು ನೀನು

ತಾಯಿ-ತಂಗಿ, ಗೆಳತಿ-ಒಡತಿ
ನಿನ್ನದಪಾರ ರೂಪ
ಶಕ್ತಿ-ಸೃಷ್ಟಿ ನಿನ್ನೆರಡು ದೃಷ್ಟಿ
ಬೆಳಗುತಿರಲಿ ನಿನ್ನ ಬಾಳ ನೌಕೆ

ಮಹಿಳೆಯೆಂಬ ಮಹಾ ಮಹಿಮೆಗೆ, ಮಹಿಳಾ ದಿನಾಚರಣೆಯ ಶುಭಾಶಯಗಳು

Friday, March 3, 2023

ಸೋಲು - ಗೆಲುವು

ಸೋಲೊಂದು ಬಾಯಿಬಡುಕ
ಮುಗ್ಗರಿಸಿದೊಡನೆಯೇ 
ಮುನ್ನುಗ್ಗಿ ಮನೆ ಮಾತಾಗುತ್ತದೆ

ಗೆಲುವೊಂದು ಗೌಣ
ಬಚ್ಚಬಾಯಿಯ ಏಕಾಂಗಿ
ತನ್ನೊಡಲ ಎಣ್ಣೆಹೊಯ್ದು 
ಹಚ್ಚಿದ ದೀಪ 
ಹೆಚ್ಚೆಂದು ಹೇಳಲರಿಯದ ಎಳವ

ಸೋಲಿಗೆ ಸೊಲ್ಲೆತ್ತಿ 
ಸುಳ್ಳೇ ನುಡಿವ ಎಲೆ ಮನವೇ
ಗುದ್ದಾಡಿ ಗೆಲ್ಲುವ ಗೆಳೆಯರಿಗೆ
ಗದ್ಗದಿಸದೆ ಹರಸಿ ಆಸರೆಯಾಗಲಾರೆಯ???

Sunday, January 15, 2023

ಸಂಕ್ರಾಂತಿಯಂದರೇ...

ಸುಗ್ಗಿಯ ಸಂಭ್ರಮ
ಬೆಳೆಗಳ ಒಪ್ಪ-ಓರಣ
ಮನೆ ಮೆದೆಗಳಿಗೆ ತಳಿರು ತೋರಣ
ಮಾವು, ನೇರಳೆ, ಹಲಸು, ಅಂಕೋಲೆಯ ಅಲಂಕಾರ

ಹೊನ್ನೆ, ಉಗನಿ, ತುಂಬಿ, ಅಣ್ಣೆಹೂಗಳ ಸೇರಿಸಿ 
ಕೊಟ್ಟಿಗೆಯನಲಂಕರಿಸಿ
ರಾಸುಗಳ ಪೂಜಿಸಿ
ದುಡಿದು ದಣಿದ ದನಕರುಗಳ ಗೌರವಿಸಿ

ಕೊರಳಿಗೆ ಘಂಟೆ, ಕೊಂಬಿಗೆ ಕಳಸ
ಅಂದಚಂದದಿ ಸಿಂಗರಿಸಿ
ಕಿಚ್ಚಾರಲೊರಟ ರಾಸುಗಳೇ 
ನಮ್ಮ ಹಳ್ಳಿಗಳ್ಳಿಗೆ ಅಲಂಕಾರ 

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...