ಕಲ್ಲು ಸವೆದಾವ
ಕುಡುಗೋಲು ಸವೆದಾವ
ಬೆನ್ನ ಮೂಳೆಯೂ ಸವೆದಾವ
ಕಷ್ಟದೊಳು ಕನಸುಗಳೂ ಸವೆದಾವ
ಸೋತರು ಬಿಡಲೊಲ್ಲೆನೆಂಬ ಛಲ ಬೆಳೆದಾವ
ಆ ಛಲದಿಂದ ಹೊಲದಾಗ ಬೆಳೆ ಬೆಳೆದಾವ
ಹಸಿರು ತೆನೆ ತೆನೆದು ಹಸಿವನೀಗ್ಯಾವ
ಜಗದಸಿವ ನೀಗ್ಯಾವ
ಸತ್ತ ಸಂಬಂಧಗಳ ಸರತಿ ಸಾಲಿನಲಿ ಸದ್ದಿಲ್ಲದೆ ನಡೆದವನು ನಾನು! ಚುಚ್ಚಿ, ಚಿವುಟಿ, ಮನ ಛಿದ್ರಗೊಳಿಸಿದ್ದು ಇವರೇ ಅಲ್ಲವೇನು!
No comments:
Post a Comment