Tuesday, November 8, 2022

ಸಾವಯವ ಕೃಷಿ

ಸಾರಬೇಕಿದೆ ನಾವು ಸಾವಯವ ತತ್ವ
ಬೇಸಾಯದಿ ಪಾಲಿಸೋಣ ಸಾವಯವ ಸತ್ವ
 
ಮಾಡಬೇಕಿದೆ ದೃಢ ಸಂಕಲ್ಪ
ಉಣಿಸದಿರಲು ಭೂತಾಯಿಗೆ ವಿಷವನು ಅಲ್ಪ
 
ಮರೆತರಂತು ಮಣ್ಣಿನ ಇತಿಹಾಸ
ಸೃಷ್ಟಿಸಲಾಗದು ಮನುಜಮೊಗದಲ್ಲಿ ಮಂದಹಾಸ
 
ಸವಕಳಿ ತಡೆಯಲು ಬದು ನಿರ್ಮಾಣ
ಬದುವಿಲ್ಲದ ಹೊಲ-ಗದ್ದೆಗಳವು ಅಂತರ್ಜಲಕ್ಕೆ ನಿರ್ಯಾಣ
 
ಮಾರಕ ಕೀಟನಾಶಕಗಳು, ರಸಗೊಬ್ಬರಗಳವು ಅಧಿಕ ಖರ್ಚಿಗೆ ದಾರಿ
ಪಾಲಿಸೋಣ ಸಾವಯವ ಸತ್ವ ಆಗದು ಬೇಸಾಯ ದುಭಾರಿ
 
ಸಾವಯವ ಕೃಷಿಯದು ದುಡಿವುದು ಮಣ್ಣಿನ ಬಲವರ್ಧನೆಗೆ
ಬಹು ಬೇಡಿಕೆ ಇರುವುದು ಸಾವಯವ ಬೆಳೆಗಳಿಗೆ
 
ತರಗೆಲೆ, ಕಳೆಗಿಡ ಭೂಮಿಗೆ ಗೊಬ್ಬರ
ಹಾಕದಿರು ನೀ ಮಣ್ಣಲಿ ಕರಗದಿಹ ರಸಗೊಬ್ಬರ
 
ಯುವ ರೈತರೆಲ್ಲರೂ ಮಾಡಬೇಕಿದೆ ದೃಢ ಸಂಕಲ್ಪ
ಉಣಿಸದಿರಲು ಭೂತಾಯಿಗೆ ವಿಷವನು ಅಲ್ಪ

No comments:

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...