Tuesday, November 15, 2022

ಪ್ರಸಾದನ ಪ್ರಣಾಮಗಳು

ನೀವೆನ್ನ ಸಲಹಿದಿರಿ
ನಾನೆಲ್ಲ ಸಹಿಸಿದೆನು
ನಾವೆಲ್ಲ ಶ್ರಮಿಸಿದೆವು
ಸಾಹಿತ್ಯದಾಶಕ್ತಿ ಸಂಘಟಿಸಿರುವದು ನಮ್ಮೆಲ್ಲರ 

ಪ್ರಶಸ್ತಿ ಪ್ರಶಂಸೆಯಿಂದಾಚೆಗೆ ಬರೆದಿರಿ
ಪೊರೆವಂತೆ ಕಿರು ಕವಿಗೋಷ್ಠಿಯನ್ನ
ತಮ್ಮೆಲ್ಲರ  ಅಮೃತಾಕ್ಷರದಲ್ಲಿ
ಮೂಡಿಹುದು ಸಿರಿಧಾನ್ಯ ಸುಧೆ
ಸೃಷ್ಟಿಸಿರುವದು ಕಿರು ಕಾವ್ಯದಾಮೃತ

ಹೆಜ್ಜೆಗೆಜ್ಜೆಗೆ ಹೆಚ್ಚಿದ ಅನುಭವ 
ದೂಡಿಹುದು ದುಡಿಯಲು ಕಿರು ಸಿರಿಗಾಗಿ
ಸಿರಿಧಾನ್ಯ ಕಾವ್ಯಲಹರಿಗಾಗಿ
ಅಚ್ಚಳಿಯದುಳಿಯಲಿ ಇತಿಹಾಸ ಪುಟಗಳಲಿ
ನಮ್ಮೆಲ್ಲರ ಕಿರು ಕಾವ್ಯ ಸೇವೆ
ಮತ್ತೆ ತಮ್ಮೆಲ್ಲರ ಅಮೃತಾಕ್ಷರದಲಿ, ಎಲ್ಲೆಡೆ ಪಸರಿಸಲಿ

No comments:

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...