ನೀವೆನ್ನ ಸಲಹಿದಿರಿ
ನಾನೆಲ್ಲ ಸಹಿಸಿದೆನು
ನಾವೆಲ್ಲ ಶ್ರಮಿಸಿದೆವು
ಸಾಹಿತ್ಯದಾಶಕ್ತಿ ಸಂಘಟಿಸಿರುವದು ನಮ್ಮೆಲ್ಲರ
ಪ್ರಶಸ್ತಿ ಪ್ರಶಂಸೆಯಿಂದಾಚೆಗೆ ಬರೆದಿರಿ
ಪೊರೆವಂತೆ ಕಿರು ಕವಿಗೋಷ್ಠಿಯನ್ನ
ತಮ್ಮೆಲ್ಲರ ಅಮೃತಾಕ್ಷರದಲ್ಲಿ
ಮೂಡಿಹುದು ಸಿರಿಧಾನ್ಯ ಸುಧೆ
ಸೃಷ್ಟಿಸಿರುವದು ಕಿರು ಕಾವ್ಯದಾಮೃತ
ಹೆಜ್ಜೆಗೆಜ್ಜೆಗೆ ಹೆಚ್ಚಿದ ಅನುಭವ
ದೂಡಿಹುದು ದುಡಿಯಲು ಕಿರು ಸಿರಿಗಾಗಿ
ಸಿರಿಧಾನ್ಯ ಕಾವ್ಯಲಹರಿಗಾಗಿ
ಅಚ್ಚಳಿಯದುಳಿಯಲಿ ಇತಿಹಾಸ ಪುಟಗಳಲಿ
ನಮ್ಮೆಲ್ಲರ ಕಿರು ಕಾವ್ಯ ಸೇವೆ
ಮತ್ತೆ ತಮ್ಮೆಲ್ಲರ ಅಮೃತಾಕ್ಷರದಲಿ, ಎಲ್ಲೆಡೆ ಪಸರಿಸಲಿ
No comments:
Post a Comment