ನನ್ನಾಕೆಯ ಆಸೆಗೆ ನಾವಿಕನಾಗಿ
ಸಾಗಿತು ಪಯಣ ನಾಗನ ಪೂಜೆಗೆ
ಸಾಗಿತು ಪಯಣ ನಾಗನ ಪೂಜೆಗೆ
ಹುತ್ತದ ಸುತ್ತಲೂ ಹಣ್ಣಿನ ರಾಶಿ
ಹಾಲು ಹರಿದಿದೆ ಝರಿಯಾಗಿ
ಹೂವಿನ ಹಂದರದೊಳದೊಳಗೇ
ಮಮ್ಮಲ ಮರುಗಿದ ಮನಸು ಕೂಗಿತು
ಪೂಜೆಯನಂತರ ಆರತಿಯೆತ್ತಿ
ಕಂದಗೂ, ಕರುವಿಗೋ ಹಾಲುತುಪ್ಪ
ಹಣ್ಣು ಹಸಿದವಗೆ ಹಂಚಬಹುದಿತ್ತು
ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...
No comments:
Post a Comment