Saturday, April 18, 2020

ನಾಳೆಯ ನಂಬಿಕೆಯಲ್ಲಿ

ಮುಂಬರುವ ನಿನ್ನ ನಾಳೆಗಳಿಗೆ,
ನಿನ್ನ ಅವಶ್ಯಕತೆಯಿದೆ...
ನೆನ್ನೆಗಳಿಗಲ್ಲ...
ಇನ್ನು ಕಳೆದುದರ ಬಗ್ಗೆ ಚಿಂತೆ ಏತಕೆ...?

ಅರಿಯುವ ಮನಸು

ಒಂದು ಮುಸ್ಸಂಜೆ,
ಒಂದು ಒಂಟಿತನ,
ಬದುಕಿನ ಅತಿದೊಡ್ಡ ಗುರು,
ಅರಿಯುವ ಮನಸಿದ್ದರೆ...
ಮನಸಿನ ಮುಖವಾಡ ಕಳಚಿಟ್ಟು ನಿನ್ನ ಬದುಕ ನೀನರಿ...

Tuesday, July 16, 2019

ಗ್ರಹಣ

ಅದ್ಬುತ - ಖಗೋಳ ವಿಜ್ಞಾನಿಗೆ
ಅದೃಷ್ಟ-ಅನಿಷ್ಟ - ಸಾಮಾನ್ಯರಿಗೆ
ಅಜ್ಞಾತ - ಕಾಯಕಯೋಗಿಗೆ


Thursday, March 14, 2019

ಯಾವ ಜನ್ಮದ ಪಾಪವೋ

ಯಾವ ಜನ್ಮದ ಪಾಪವೋ
ಇಲ್ಲಿ ಬಂದಿ ನಾನು
ಶ್ರಮ ಕಾಣದ ಕಣ್ಣ ಕ್ರೋರಿ ನೀನು

Friday, March 2, 2012

'ಮಧು'ರವಾಯಿತು ನೆನಪು

ಸರಿ ಸುಮಾರು ನಾಲ್ಕು ವರ್ಷ ಮೂರು ತಿಂಗಳುಗಳ Logix Microsystems ನೊಂದಿಗಿನ ಒಡನಾಟ ಕಡಿದುಕೊಳ್ಳೋ ಕಾಲ ಎದುರಿಗೆ ಬಂದು ನಿಂತಿದೆ, ಹಲವಾರು ಏರು ಪೇರುಗಳು ನನಗೆ ಪಾಠಗಳನ್ನ ಕಲಿಸಿವೆ. ನನ್ನೋಳಗದಗಿದ್ದ ಲೀಡರ್ ಅನ್ನ ಉಡುಕಿ ತೆಗೆದ ಕೀರ್ತಿ ನನಗೆ ಮ್ಯಾನೇಜರ್ ಆಗಿ ನಮ್ಮ ಇಡಿ ತಂಡವನ್ನ ಮುನ್ನೆಡೆಸಿದ ಮಧು ಸತ್ಯನಾರಾಯಣ್ ಅವರಿಗೆ ಸಲ್ಲುತ್ತೆ. ೨೦೦೭ ಡಿಸೆಂಬರ್ ೧೩ನೇ ತಾರೀಕು ಈ ತಂಡವನ್ನ ಸೇರಿಕೊಂಡಾಗ ಏನೋ ಮುಜುಗರ, ಹೊಸ ವಾತಾವರಣ, ಹೊಸ ಜನ, ಹೊಸ ಪ್ರಾಜೆಕ್ಟ್, ಎಲ್ಲವು ಹೊಸದಿತ್ತು, ದಿನಗಳು ಕಳೆದಹಾಗೆ, ಎಲ್ಲವು ಅಬ್ಯಾಸ ಆಯಿತು, ಎಲ್ಲರೊಳಗೊಂದಾಗಿ ನಾನು ನಡೆದೇ, ನಮ್ಮದೇ ರಾಜ್ಯಬಾರ ಕೂಡ ನಡಿತು, ಬೇರೆ ಬೇರೆ ತಂಡಗಳೊಂದಿಗೆ ಕೆಲಸಮಾಡೋ ಅವಕಾಸ ಸಿಕ್ತು, ಹೊಸದನ್ನ ಕಲಿಯೋ ಅವಕಾಸಗಳು ನಾ ಮುಂದು ತಾ ಮುಂದು ಅಂತ ನುಗ್ಗಿ ಬಂದು ಒಂದಷ್ಟು ಜ್ಞಾನನ ನನ್ನ ತಲೆಗೆ ತುಂಬಿ ನನ್ನನ್ನ ಬೆಳೆಸಿದವು. ಹೊಸ ಹೊಸ ಚಾಲೆಂಜೆಸ್, ಹೊಸ ಗುರಿಗಳು, ನನ್ನ ಇಂದೇ ಗುರುವಾಗಿದ್ದ ಮಧುಅವರ ಸಲಹೆ ಸೂಚನೆಗಳು, ಎಲ್ಲವು ನನ್ನ ಮುಂದಿನ ಜೀವನಕ್ಕೆ ಅದ್ಬುತ ಪಾಠಗಳು. Hats off to ಮಧು. ಒಳ್ಳೆ ಗುರಿ, ಒಬ್ಬ ಒಳ್ಳೆ ಗುರು ಇದ್ರೆ ಏನೆಲ್ಲಾ ನಡಿಬೇಕೋ ಅದೆಲ್ಲವನ್ನ ನಾವು ಸಾದಿಸಿದ್ವಿ

ಎಲ್ಲವು ನಮ್ಮ ಇಡಿತದಲ್ಲೆ, ನಾವು ಅಂದುಕೊಂಡ ಹಾಗೆ ನಡೀತಾ ಇತ್ತು, ಅದಾವ ಗಳಿಗೆಯಲ್ಲಿ ಅದಾವ ಮಾರಿ ಕಣ್ಣು ಬಿತ್ತೋ ಏನೋ, ಮಧು ನಮ್ಮ ಟೀಂ ಇಂದ ಹೋಗಬೇಕಾಗಿ ಬಂತು. ಆ ಗಳಿಗೇನೆ ದೊಡ್ಡ ಸಿಡಿಲು ಬಡಿದಂತಾಗಿ ನಮ್ಮ ಟೀಂ ಚಿದ್ರ ಆಯಿತು. ನಮ್ಮಗಳ ರಾಜ್ಯಬಾರ ಕೂಡ ಮುಗಿಯೋ ಟೈಮ್ ಬಂತು. ಒಳ್ಳೆ ಗುರಿ, ಇದ್ದ ಒಳ್ಳೆ ಗುರು ಇಲ್ಲದಂತಾಗಿ, ಮುಂದಿನ ದಾರಿ ಹುಡುಕಾಟದಲ್ಲಿ ಇದೇನೇ. ಮತ್ತೆ ಹೊಸ ಜಾಗ, ಹೊಸ ಜನ, ಹೊಸ ಪ್ರಾಜೆಕ್ಟ್....

ಮಧು, ಇನ್ನು ಕೆಲವೇ ದಿನ ಈ ಕಂಪನಿ ಅಲ್ಲಿ ಇರ್ತೇನೆ, ಆದರೆ ನೀವಿಲ್ಲದ ಟೀಂ, ನೀವಿಲ್ಲದ ನಮ್ಮ ಕನಸಿನ AOA ಗೆ ಉಳಿವಿಲ್ಲ.

ದೋಣಿ ಸಾಗಲಿ ಮುಂದೆ ಹೋಗಲಿ ಅಂತ ಮುಂದೆ ಮುಂದೆ ಹೋಗ್ತಾ, ಮತ್ತೆ ಮಧು ಜೊತೆ ಕೆಲಸ ಮಾಡೋ ಕಾಲ ಬರಲಿ ಅಂತ ನನ್ನ ಆಸಯ.

Thursday, September 3, 2009

ನಿನ್ನಿಂದಲೇ...

ಗೆಳತಿ!!!
ಅದಾವ ಕ್ಷಣದಲಿ ನೀ ಸೃಷ್ಟಿಕರ್ತೆಯಾದೆ?
ಅದಾವ ಕ್ಷಣದಲಿ ನನ ಮನಸಿಗೆರಡು ರೆಕ್ಕೆ ಕೊಟ್ಟೆ?
ಹಾರುತ್ತಿದೆ ಮನಸಿಂದು ಸ್ವಚ್ಚಂದವಾಗಿ...
ನಿನ್ನಿಂದಲೇ...

Monday, March 9, 2009

ಪ್ರೀತಿಯಿಂದಲ್ಲ...!!! ದ್ವೇಷದಿಂದ

ಅರಿಯದಾಗಿದೆ ಎಲೆ ಹುಡುಗಿ
ನಿನ್ನುಪಕಾರದಿಂದ ಋಣಮುಕ್ತನಾಗುವ ಬಗೆ
ಗೋರ್ಕಲ್ಲು ನಾ ಶಿಲೆಯಾಗಿಸಿದೆ
ನೀ ದ್ರೋಣಾಚಾರ್ಯ್ಯರ೦ತೆ
ಏಕಲವ್ಯನು ನಾ
ನೀ ದೂರಿದ್ದರು ಸ್ಪೂರ್ತಿಯಾದೆ
ಪ್ರೀತಿಯಿಂದಲ್ಲ...!!! ದ್ವೇಷದಿಂದ.

ಸತ್ತ ಸಂಬಂಧಗಳು

ಸತ್ತ ಸಂಬಂಧಗಳ ಸರತಿ ಸಾಲಿನಲಿ ಸದ್ದಿಲ್ಲದೆ ನಡೆದವನು ನಾನು! ಚುಚ್ಚಿ, ಚಿವುಟಿ, ಮನ ಛಿದ್ರಗೊಳಿಸಿದ್ದು ಇವರೇ ಅಲ್ಲವೇನು!