Friday, November 3, 2023

ಹಚ್ಚಬೇಕಿದೆ ನಾವು "ದೀಪ"

ಆತ್ಮಸಾಕ್ಷಾತ್ಕಾರಕ್ಕಾಗಿ
ಪ್ರಸನ್ನತೆಯ ಪ್ರಾಪ್ತಿಗಾಗಿ
ನಮ್ಮಾತ್ಮ ಜ್ಯೋತಿಯ ಮನನಕ್ಕಾಗಿ
ಮನು ಮನದ ಮಾನಸಿಕ ನೆಮ್ಮದಿಗಾಗಿ
ಮನುಕುಲದ ಪ್ರಾಣಶಕ್ತಿಯ ಸ್ಥಿರತೆಗಾಗಿ

ಮಹದಾಯಿಯ ಮಮತೆ ಇಲ್ಲ, ಕಾವೇರಿಯ ಕರುಣೆಯು ಇಲ್ಲ

ಮಾತೆ ಮಹದಾಯಿಯು ಇವಳು
ಹರಿವಳು ಕರ್ನಾಟಕ, ಮಹಾರಾಷ್ಟ್ರ, ಗೋವಾದೊಳು
ಅರಬ್ಬೀ ಸಮುದ್ರದ ಅಂತರಂಗದೊಳು ಇಳಿವಳು
 
ಕರುಣೆಯ ಕಾವೇರಿಯು ಇವಳು
ಹರಿವಳು ಕರ್ನಾಟಕ, ತಮಿಳುನಾಡಿನೊಳು
ಬಂಗಾಳ ಕೊಲ್ಲಿಯಲ್ಲಿ ಇಳಿವಳು
 
ಬಯಲ ಬೆಳೆಯ, ಕುಡಿವ ಕಂದನ ಬಾಯಾರಿಕೆಯನ್ನಾರಿಸಿ
ಕಬ್ಬು, ಭತ್ತ, ರಾಗಿ ಬೆಳೆಗಳ ಬೆಳೆಸಿ
ಖಗ ಮೃಗ ಕಾಡುಗಳ್ಳನ್ನರಳಿಸಿ
 
ಕರುನಾಡ ಕಂದಮ್ಮಗಳ ಮಾತೆಯರಿವರು
ಈಶ್ವರಿ ಸ್ವರೂಪದವರು
ಹರಿದು ಹಂಚಿ ವಿವಾದಕ್ಕೆ ಸಿಲುಕಿದವರು
 
ಕರುನಾಡ ಕಣ್ಗಳಿವರು
ಕರುಣೆಯಿಂದೆಮಗೆ ದೊರೆಯದಾಗಿಹರು
ಸ್ವಾರ್ಥ ನ್ಯಾಯದೀ ನೊಂದು ನಲಗಿಹರು
 
ಬರದ ಬೆಂಕಿಯಲಿ ಬೆಂದು
ಅನ್ಯಾಯದ ತೀರ್ಪುಗಳಲಿ ನೊಂದು
ತವರ ತೊರೆದಿಹರು ಇಂದು
 
ಕರುನಾಡಿನ ರೈತ ಕುವರರು ನಾವು
ಉಂಡಿವೆವು ಜಲ ನಿರ್ವಹಣಾ ಪ್ರಾಧಿಕಾರಗಳಿಟ್ಟ ಬೇವು
ಬೇಕಿದೆ ನಮಗೆ ಮಹದಾಯಿಯ ಮಮತೆ, ಕಾವೇರಿಯ ಕಾರುಣ್ಯವು

Friday, October 27, 2023

ಮಾಡಬೇಕಾಗಿದೆ ಸಾವಯವದೆಡೆಗೆ ಮುಖ

ಫಸಲ ಜೀವ ಹಿಂಡದಿರಲು
ಫಲವತ್ತತೆಯ ಕಸಿಯದಿರಲು
ಮಣ್ಣ ಮಲಿನಗೊಳಿಸದಿರಲು
ಜೀವಜಂತುಗಳ ಕೊಲ್ಲದಿರಲು
ಕೃಷಿಯ ಹೊರೆಯಾಗಿಸದಿರಲು
ನೀರ ನೆಲೆಗಳ ಕೊಳಕಾಗಿಸದಿರಲು
ಭುವಿಯ ಬರಡೆಂದು ದೂರದಿರಲು
ಹಸಿದುಣ್ಣವ ಅನ್ನದಲಿ ವಿಷವ ಸೇರಿಸದಿರಲು
ಮಾಡಬೇಕಾಗಿದೆ ನಾವು ಸಾವಯವದೆಡೆಗೆ ಮುಖ

ನಾವೇಕೆ ಸಾವಯವ ಕೃಷಿಯತ್ತ ಮುಖಮಾಡಬೇಕು...!!!

ಇತ್ತೀಚಿನ ದಿನಮಾನಗಳಲ್ಲಿ ಸಾವಯವ ಕೃಷಿಯು ಮನ್ನಣೆ ಮತ್ತು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎನ್ನುವುದು ಸಮಾಧಾನಕರ ವಿಷಯವಾದರೂ, ಇದರ ಜಾಗೃತಿ, ತಿಳುವಳಿಕೆ ಮತ್ತು ಅಳವಡಿಕೆಯು ಮಂದಗತಿಯಲ್ಲೇ ಸಾಗಿದೆ, ಆದರೂ ಯುವ ಸಮುದಾಯ ಸಾವಯವದತ್ತ ಮುಖ ಮಾಡಿರುವುದು ಸಮಾಧಾನಕರ ಸಂಗತಿಯೇ ಸರಿ. ಅಭಿವೃದ್ಧಿಯ ಹೆಸರಿನಲ್ಲಿ ಸಾಂಪ್ರದಾಯಿಕ ಕೃಷಿಯಿಂದ ಉಂಟಾಗುವ ಪರಿಸರ, ಆರೋಗ್ಯ ಮತ್ತು ಸುಸ್ಥಿರತೆಯ ಸವಾಲುಗಳ ಬಗ್ಗೆ ರೈತ ಸಮುದಾಯ ಇನ್ನೂ ಹೆಚ್ಚು ಜಾಗೃತವಾಗಬೇಕಾಗಿದೆ.

ಪರಿಸರ ಸಂರಕ್ಷಣೆ: ಸಾವಯವ ಕೃಷಿಯ ಅಗತ್ಯಕ್ಕೆ ಅತ್ಯಂತ ಬಲವಾದ ಕಾರಣವೆಂದರೆ ಪರಿಸರ ಸಂರಕ್ಷಣೆಯಲ್ಲಿ ಅದರ ಪಾತ್ರ. ಸಾಂಪ್ರದಾಯಿಕ ಕೃಷಿಯು ಸಾಮಾನ್ಯವಾಗಿ ಸಂಶ್ಲೇಷಿತ ಕೀಟನಾಶಕಗಳು, ಸಸ್ಯನಾಶಕಗಳು ಮತ್ತು ರಸಗೊಬ್ಬರಗಳ ಮೇಲೆ ಅವಲಂಬಿತವಾಗಿದೆ, ಇದು ಪರಿಸರದ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಉಂಟುಮಾಡುತ್ತದೆ. ರಾಸಾಯನಿಕಗಳು ನೀರಿನ ಮೂಲಗಳನ್ನು ಕಲುಷಿತಗೊಳಿಸುವುದಲ್ಲದೆ, ಮಣ್ಣಿನ ವಿನಾಶಕ್ಕೆ ಕಾರಣವು ಹೌದು. ಮತ್ತೊಂದೆಡೆ, ಸಾವಯವ ಕೃಷಿಯು ಬೆಳೆ ಸರದಿ, ಕವರ್ ಕ್ರಾಪಿಂಗ್ ಮತ್ತು ನೈಸರ್ಗಿಕ ಗೊಬ್ಬರಗಳ ಬಳಕೆಯಂತಹ ಅಭ್ಯಾಸಗಳನ್ನು ಪ್ರೋತ್ಸಾಹಿಸಿ, ಪರಿಸರವನ್ನು ಸಂರಕ್ಷಣೆಯಲ್ಲಿ ಸಹಾಯ ಮಾಡುತ್ತದೆ.

ಮಣ್ಣಿನ ಆರೋಗ್ಯ ಮತ್ತು ಸುಸ್ಥಿರತೆ: ಆರೋಗ್ಯಕರ ಮಣ್ಣು ಕೃಷಿಯ ಅಡಿಪಾಯವಾಗಿದ್ದು, ಸಾವಯವ ಕೃಷಿ ಮಣ್ಣಿನ ಆರೋಗ್ಯಕ್ಕೆ ಆದ್ಯತೆ ನೀಡುತ್ತದೆ. ಮಣ್ಣಿನ ಮಲಿನತೆ ಮತ್ತು ಅಡಚಣೆಯನ್ನು ಕಡಿಮೆಗೊಳಿಸುವ ಮೂಲಕ, ಫಲವತ್ತತೆ ಮತ್ತು ಸುಸ್ಥಿರ ಮಣ್ಣಿನ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಆರೋಗ್ಯಕರ ಮಣ್ಣು ಬೆಳೆ ಉತ್ಪಾದಕತೆಯನ್ನು ಹೆಚ್ಚಿಸುವುದಲ್ಲದೆ ಭೂ ಸವೆತವನ್ನು ತಗ್ಗಿಸುತ್ತದೆ.

ಕಡಿಮೆಯಾದ ರಾಸಾಯನಿಕ ಉಳಿಕೆಗಳು: ಸಾಂಪ್ರದಾಯಿಕ ಕೃಷಿಯಲ್ಲಿ ಸಂಶ್ಲೇಷಿತ ರಾಸಾಯನಿಕಗಳ ಬಳಕೆಯು ಆಹಾರೋತ್ಪನ್ನಗಳಲ್ಲಿ ರಸಾಯನಿಕಗಳ ಸೇರಿಕೆ ಮತ್ತು ಉಳಿಕೆಗೆ ಕಾರಣವಾಗಿ, ಮಾನವನ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಸಾವಯವ ಕೃಷಿಯು ಸಂಶ್ಲೇಷಿತ ಕೀಟನಾಶಕಗಳು ಮತ್ತು ಸಸ್ಯನಾಶಕಗಳ ಬಳಕೆಯನ್ನು ನಿಷೇಧಿಸುತ್ತದೆ, ನಮ್ಮ ಆಹಾರದಲ್ಲಿ ರಾಸಾಯನಿಕ ಉಳಿಕೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಶುದ್ಧ ಮತ್ತು ಸುರಕ್ಷಿತ ಆಹಾರದ ಪ್ರಾಮುಖ್ಯತೆಯ ಬಗ್ಗೆ ಗ್ರಾಹಕರು ಹೆಚ್ಚು ಜಾಗೃತರಾಗುತ್ತಿರುವ ಜಗತ್ತಿನಲ್ಲಿ ಇದು  ನಿರ್ಣಾಯಕ ಪಾತ್ರವಹಿಸುತ್ತದೆ.

ಕಡಿಮೆ ಕೃಷಿ ಉತ್ಪಾದನಾ ವೆಚ್ಚ: ಸಾವಯವ ಕೃಷಿಯಲ್ಲಿ ಪಳೆಯುಳಿಕೆ ಆಧಾರಿತ ರಸಗೊಬ್ಬರಗಳು ಮತ್ತು ಸಂಶ್ಲೇಷಿತ ಕೀಟನಾಶಕಗಳನ್ನು ನಿಷೇಧಿಸುವುದರಿಂದ ಕೃಷಿ ಉತ್ಪಾದನಾ ವೆಚ್ಚವು ಕಡಿಮೆ ಯಾಗುತ್ತದೆ, ರಸಗೊಬ್ಬರಗಳ ಬಳಕೆ ನಿಷೇಧದಿಂದ ಮಣ್ಣಿನಲ್ಲಿ NPK ಮಟ್ಟವು ಸುಧಾರಿಸಿ ಬೆಳೆಗಳು ರೋಗಮುಕ್ತವಾಗಿ ರೈತ ಸಮುದಾಯ ಕೀಟನಾಶಕಗಳಿಗೆ ವ್ಯಹಿಸುವ ಹಣವು ಉಳಿಯುತ್ತದೆ.

ಜೀವವೈವಿಧ್ಯ ಮತ್ತು ಪರಿಸರ ಸಮತೋಲನ: ಸಾವಯವ ಕೃಷಿಯು ಸಾಂಪ್ರದಾಯಿಕ ಕೃಷಿಯಲ್ಲಿ ಸಾಮಾನ್ಯವಾದ ಏಕಬೆಳೆ ಪದ್ಧತಿಯನ್ನು ತಪ್ಪಿಸುವ ಮೂಲಕ ಜೀವವೈವಿಧ್ಯತೇ ಮತ್ತು ಪರಿಸರ ಸಮತೋಲನವನ್ನು ಉತ್ತೇಜಿಸುತ್ತದೆ. ಸುಸ್ಥಿರ ಹಾಗು ವೈವಿಧ್ಯಮಯ ಬೆಳೆಗಳನ್ನು ಬೆಳೆಯುವ ಮೂಲಕ ಪ್ರಯೋಜನಕಾರಿ ಜೀವರಾಶಿಗಳಿಗೆ ನೈಸರ್ಗಿಕ ಆವಾಸಸ್ಥಾನಗಳನ್ನು ಒದಗಿಸಿ ಪರಿಸರ ಸಮತೋಲನಕ್ಕೆ ಕಾರಣವಾಗುತ್ತದೆ

ಮಾನವ ಆರೋಗ್ಯ ಪ್ರಯೋಜನಗಳು: ಸಾವಯವ ಆಹಾರ ಉತ್ಪನ್ನಗಳು ರಾಸಾಯನಿಕ ಅವಶೇಷಗಳಿಂದ ಮುಕ್ತವಾಗಿ ಪೌಷ್ಟಿಕ ಆಹಾರವನ್ನು ಒದಗಿಸಿ, ಮನುಕುಲದ ಆರೋಗ್ಯ ಪುನಸ್ಚೇತನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಭವಿಷ್ಯದ ಪೀಳಿಗೆಗೆ ಸಮರ್ಥನೀಯತೆ: ಸಾವಯವ ಕೃಷಿಯು ಸುಸ್ಥಿರತೆಯ ತತ್ವಗಳ ಆಧಾರದ ಮೇಲಿದ್ದು ಕೃಷಿ ಭೂಮಿಯನ್ನು ಹಾನಿಗೊಳಿಸದೆ, ಮಣ್ಣಿನ ಸವಕಳಿಯನ್ನು ತಪ್ಪಿಸಿ, ಸತ್ವಯುತ ಮಣ್ಣನ್ನು ಭವಿಷ್ಯದ ಪೀಳಿಗೆಗೆ ನೀಡುವ ಮೂಲಕ ದೀರ್ಘಾವಧಿಯ ಕೃಷಿ ಕಾರ್ಯಸಾಧ್ಯತೆಗೆ ಅನುವು ಮಾಡಿಕೊಡುತ್ತದೆ.

ಸಾವಯವ ಕೃಷಿಯು, ಪ್ರಸಕ್ತ ರಾಸಾಯನಿಕಯುಕ್ತ ಕೃಷಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಸಮಗ್ರ ಪರಿಹಾರವನ್ನು ನೀಡುವುದಲ್ಲದೆ, ಹೆಚ್ಚು ಸಮರ್ಥನೀಯ, ಪರಿಸರ ಸ್ನೇಹಿ ಹಾಗು ಆರೋಗ್ಯಕರ ಭವಿಷ್ಯದ ಕಡೆಗೆ ನಮ್ಮನ್ನು ಮುನ್ನಡೆಸುತ್ತದೆ. ಸಾವಯವ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ, ನಾವು ಮಣ್ಣು ಮತ್ತು ಸಕಲ ಜೀವಜಂತುಗಳೊಂದಿಗೆ ಸಾಮರಸ್ಯದ ಸಹಬಾಳ್ವೆಯನ್ನು ರೂಡಿಸಿಕೊಂಡು, ಮುಂದಿನ ಪೀಳಿಗೆಗೆ ಉತ್ತಮ ಜಗತ್ತನ್ನು ನೀಡಿಹೋಗಬಹುದು.

Wednesday, September 6, 2023

ಬೆಳಕಿನೆಡೆಗೆ... ಬದುಕಿನೆಡೆಗೆ...

ಕತ್ತಲೆಂದು ಕೊರಗಿದೆಯಾ!
ಅದು ಬೆಳಕಿನೆಡೆಗೆ ಮುಖಮಾಡಿರುವ ದಾರಿಹೋಕ
 
ಕಷ್ಟವೆಂದು ಸೊರಗಿದೆಯಾ!
ಅದು ಸುಖದ ದಾರಿಹಿಡಿದಿರುವವಗೆ ಸಖ
 
ಬಳಲಿದೆನೆಂದು ಬಂದಿಯಾದೆಯಾ!
ಅದು ಯಾರದು ಬೆಳೆಯಲೊರಟ ನಿನ್ನ ತಡೆಯಾಕ

Tuesday, August 8, 2023

ದಂಧೆಯ ತಂದೆ ಆಸ್ಪತ್ರೆ

ಮಕ್ಕಳುಟ್ಟುತ್ತಿದ್ದವು
ಮನೆಯಲ್ಲಿ
ಮಾನವೀಯತೆಯೂ ಹುಟ್ಟುತ್ತಿತ್ತು

ಆಗುತ್ತಿದೆ ಜನನ
ಆಸ್ಪತ್ರೆಯಲ್ಲಿ
ಹುಟ್ಟುತ್ತಿದೆ ಆಸೆಬುರುಕತನ

ಮೋಸ, ದಗಾ, ಕಳ್ಳತನವೊ
ಆಗುತ್ತದೆ
ನಮಗರಿವಿಲ್ಲದಂತೆ 

ಆಸ್ಪತ್ರೆಯ ಅಪಹರಣವೋ
ಹಾಡುಹಗಲೇ
ಆದರೂ ನಾವು ಆರೋಗ್ಯದಂದರು

ಬದುಕಲೋ, ಬದುಕಿಸಲೋ 
ನಾವ್ ಬೆವರುತ್ತಿರಲು
ಅವ ಬಸಿಯುತ್ತಿರುವ

Wednesday, May 24, 2023

ಅನುಭವದ ಹಣತೆ

ಅನುಭವದ ಹಣತೆಯಿಲ್ಲದೆ
ಹತ್ತಿದೇಣಿಯ ಒದ್ದು
ಗೆದ್ದು ಬೀಗುವುದೆಂತೋ...?
ಖುದ್ದು ದುಡಿಯದ ಹೊರತು
ಗದ್ದುಗೆಯು ದೊರೆಯದು...!
ಮೈಕೊಡವಿ ಮೇಲೆಳದೆ
ಪಲಿಸದಾಶೀರ್ವಾದ...!

ಸತ್ತ ಸಂಬಂಧಗಳು

ಸತ್ತ ಸಂಬಂಧಗಳ ಸರತಿ ಸಾಲಿನಲಿ ಸದ್ದಿಲ್ಲದೆ ನಡೆದವನು ನಾನು! ಚುಚ್ಚಿ, ಚಿವುಟಿ, ಮನ ಛಿದ್ರಗೊಳಿಸಿದ್ದು ಇವರೇ ಅಲ್ಲವೇನು!