Tuesday, March 19, 2024

ಪ್ರೀತಿ, ನಾವು ನಮ್ಮ ಮನಸಿಗೆ ಕೊಡುವ ತರಬೇತಿ. ಇರಲಿ ಅದಕ್ಕೊಂದು ನೀತಿ. ಭಾಗ - 1 (ನೈಜ ಘಟನೆಯಾದಾರಿತ)

ಅದೊಂದು ಭವ್ಯವಾದ ಮಂಗಳ ಮಂಟಪ, ನಡೆದಿತ್ತು ಅಲ್ಲೊಂದು ಸಿರಿವಂತರ ಸಡಗರದ ಮದುವೆ! ಅವರ ಅನುಕೂಲಕ್ಕೆ, ಅಂತಸ್ತಿಗೆ ತಕ್ಕನಾದ ಉಡುಗೆ ತೊಡುಗೆ, ಅಲಂಕಾರ ಎಲ್ಲವು ಅಚ್ಚುಕಟ್ಟು, ಜೊತೆಜೊತೆಗೆ ಶಾಸ್ತ್ರೋಕ್ತವಾದ ಮದುವೆ ಕಾರ್ಯಗಳು. ನೆರೆದ ಬಂಧುಬಳಗಕ್ಕೆ ಭಕ್ಶ್ಯ ಭೋಜನಗಳ ಜೊತೆಗೆ ಹೊಸನೋಟ, ಹೊಸತನ. ಈ ಮದುವೆ ಸಮಾರಂಭಗಳೆ ಹಾಗೆ ಪರಿಚಯಕ್ಕೆ, ಮಾತುಕತೆಗೆ, ಮುಖತಃ ಭೇಟಿಗೆ ಒಳ್ಳೆಯ ವೇದಿಕೆ! ಈ ವೇದಿಕೆಯಲ್ಲಿ ನಡೆದ ಅದೆಷ್ಟೋ ಪರಿಚಯಗಳಂತೇ, ಅಲ್ಲಿ ನಡೆದಿತ್ತು ಮತ್ತೊಂದು ಪರಿಚಯ, ಅದು, ವಯೋಸಹಜ ಕಣ್ಣ್ ಕಣ್ಣ ಸೆಳೆತ! ಆಕೆ ಸಿರಿವಂತಕೆಯೇ ಮೈವೆತ್ತಿದ್ದ ಸುಂದರಿ, ಆತ ಬಡವ! ಆದರೆ ಅವನಿಗದು ಅರಿವಿಲ್ಲದ ಚಿಗುರು, Love at first sight.
ಆತ ಆಗಷ್ಟೇ ಪದವಿ ಮುಗಿಸಿ, ಬೆಂಗಳೂರಿನಲ್ಲೊಂದು ಕೆಲಸಗಿಟ್ಟಿಸಿದ್ದ, ಆಕೆ ಪದವಿ ವಿದ್ಯಾರ್ಥಿ. ಪ್ರೀತಿಗಾವ ಪರಿಬಾಷೆ, ಯಾವ ಎಲ್ಲೇ, ಯಾವ ಅಡೆತಡೆ ಇಲ್ಲದೆ ಪ್ರೀತಿ ಸಂಭವಿಸುತ್ತದೆ. ಇಬ್ಬರ ನೋಟ ನಗುವಾಗಿ, ನಯವಾಗಿ ಮದುವೆಯ ಶಾಸ್ತ್ರ ಸಂಪ್ರದಾಯಗಳ ನಡುವೆ ಅಲ್ಪ-ಸ್ವಲ್ಪ ಮಾತುಕತೆಯು ಆಯಿತು, ಆದರೆ ಇಬ್ಬರಿಗೂ  ಬೇರೆ ಪರಿಚಯವಿಲ್ಲ ಎಲ್ಲ ಕೇಳಿ ತಿಳಿಯುವ ಸಮಯವೂ ಅಲ್ಲ, ಕೇಳುವ ದೈರ್ಯವೂ ಇಲ್ಲ ಹೀಗೆ ಮದುವೆ ಮುಗಿದು ಕನಸಗಳು ಹುಟ್ಟಿದವು. ಆದರೆ ಇನ್ನೊಂದೆರಡುದಿನ  ವರನ ಗೃಹದಲ್ಲೊಂದು ಆರತಕ್ಷತೆ (ಬೀಗರ ಔತಣ ಎಂದುಕೊಳ್ಳಿ) ಮೊಳಕೆಯೊಡೆದ ಕನಸಿಗೊಂದು ವೇದಿಕೆ, ನೋಡಲವಕಾಶ ಕಲ್ಪಿಸುತ್ತದೆ, ಎನ್ನುವುದು ಆತನ ಊಹೆ.
 
ಊಹಿಸಿದಂತೆ ಆಕೆ ಬೀಗರ ಔತಣಕ್ಕೆ ಬಂದಿಳಿದಳು. ಅದು ನೋಟ ನಗುವಿಗೆ ವೇದಿಕೆಯಾಯಿತೇ ಹೊರತು ವಿಷಯ ವಿನಿಮಯಕ್ಕಲ್ಲ. ಅದನ್ನು ಭಯವೆನ್ನಿ, ಫಿಯರ್ ಆಫ್ ಫೇಲ್ಯೂರ್ ಅನ್ನಿ ಹಾಗೆಯೆ ಏನೂ ಹೇಳದೆ ಕೆಲವೊಂದು ನೋಟ-ನಗುವಿನಲ್ಲಿ ಬೀಗರ ಔತಣ ಮುಗಿದುಹೋಯಿತು, ಆತನ ಬಡತನದ ಜೊತೆಗಿಷ್ಟು ಭಯ ಮತ್ತು ಆಕೆಯ ಸಿರಿತನದ ಜೊತೆಗಿಷ್ಟು ದೈರ್ಯವಂತೂ ಕಟ್ಟಿಟ್ಟ ಭುತ್ತಿ ಬಂದ ಕಾರ್ಯಕ್ರಮ ಮುಗಿಸಿ ಹೊರಟು ನಿಂತ ಆಕೆ ಎಲ್ಲರ ಮುಂದೆ ಆತನಿಗೊಂದು ಬೈ ಹೇಳಿ ಕಾರತ್ತಿ ಹೊರಟು ಹೋದಳು.
 
ಅದಿನ್ನೂ ಲ್ಯಾಂಡ್ಲೈನ್ ಯುಗ, ಮೊಬೈಲ್ಗಳು ಎಲ್ಲರ ಕೈತಲುಪಿರಲಿಲ್ಲ. ಸೊ ಬೇಕಿದ್ದವರು ನಂಬರ್ ಪಡೆಯುದುವು ಕಾಲ್ ಮಾಡಿ ಮಾತನಾಡುವುದು ಸಂಕಷ್ಟವೇ ಸರಿ. ಹೀಗಿರುವಾಗ ಹೆಸರು ಕೇಳದೆ, ಯಾರೆಂದು ತಿಳಿಯದೆ ಆಕೆ ಮತ್ತು ಆತನ ನಡುವೆ ಒಂದು ಬ್ರೇಕ್ ಬಿದ್ದಿತ್ತು. ಜೊತೆಗೆ ಹೆಸರು ತಿಳಿಸದ ಆಕೆ, ಆತನಿಗೆ ಅನಾಮಿಕೆಯಾಗಿದ್ದಳು!
 
ಇದ್ದದ್ದು ದೂರವೇ, ಆದರೇನು ಕನಸುಗಳಿಗೆ ಕೊರತೆ ಇಲ್ಲ, ಆತ ಮನಸೆನೆಂಬ ದೇಗುಲದಲ್ಲಿ, ‘ಅನಾಮಿಕೆ’ಯಂಬ ದೇವತೆಯನಿರಿಸಿ, ನೆನಪಿನ ನೈವೇದ್ಯೆ ನೀಡಿ ನಡೆಸಿದ್ದ ಪ್ರೀತಿಯ ಪೂಜೆ, ಮತ್ತು ಈ ಪೂಜಾ ಕೈಂಕರ್ಯ ಸರಿ ಸುಮಾರು ಎರಡು ವರ್ಷವಿರುವಾಗ. ಪ್ರೀತಿಯ ಪರೀಕ್ಷೆಗೆ ಬೇಕಾದ ಸಕಲ ಸಿದ್ಧತೆ ಮಾಡಿ ಸಿಕ್ಕ ಸಣ್ಣ ಪುಟ್ಟ ಸುಳಿವುಗಳನ್ನ ಕ್ರೋಡೀಕರಿಸಿ ಕೊನೆಗೂ ಯಲ್ಲೋ ಪೇಜೆಸ್ ಸಹಾಯದಿಂದ ಆಕೆಯ ವಿಳಾಸದಕ್ಕಿಸಿಕೊಂಡು, ಆತ ಮೆಟ್ರೋ ಸಿಟಿಯಿಂದ ಹೊರಟ ಪಯಣ ಸ್ನೇಹಿತರ ಸಹಾಯದೊಂದಿಗೆ ಬಂದು ನಿಂತದ್ದು ಆಕೆಯ ಮನೆಯ ಮುಂದೆ. ಹಿಂದೆ ನಡೆದಿದ್ದ ಮದುವೆಯ ಪರಿಚಯದಿಂದ ಅತಿಥಿ ಸತ್ಕಾರಕ್ಕೇನು ಕೊರತೆತರಲಿಲ್ಲ, ಮನೆ ಸಿಕ್ಕ ಖುಷಿಯೊಂದಿಗೆ, ಡೈನಿಂಗ್ ಟೇಬಲ್ ನಲ್ಲಿ ಟೀ ಸವಿಯುತ್ತ ಆತ ಕಣ್ಣಾಡಿಸಿದ್ದು ಅಲ್ಲಿದ್ದ ಪುಸ್ತಕಗಳ ಮೇಲೆ ಆಗ ಪುಸ್ತಕಗಳು ಹೇಳಿದವು ಆ ಅನಾಮಿಕೆಯ ಹೆಸರು!!! ಅಂತೂ ಟೀ ಸವಿದು ಮುಗಿಯುವ ವೇಳೆಗೆ ಆಕೆಯ ದರ್ಶನವು ಹಾಗಿ ಆತ ಅಲ್ಲಿಂದ ಹೊರಟ. ಎರಡು ವರ್ಷಗಳ ನಿರಂತರ ಪೂಜೆಗೆ ದೊರೆತದ್ದು ದೇವಿ ದರ್ಶನ ಮತ್ತು ಆಕೆಯ ಹೆಸರೇ ವರಪ್ರಸಾದ!!! ಅಂತೂ ಕಡಲಾಳದಿಂದ ಮುತ್ತೆತ್ತಿದ ಸಂಭ್ರಮ, ಎರಡು ವರ್ಷಗಳ ಕಾಯುವಿಕೆಗೆಗೊಂದು ಬ್ರೇಕ್!
 
ಇದೆ ಖುಷಿಯಲ್ಲಿ ಆತನೆದೆಯಲ್ಲಿ ನಡೆದಿತ್ತು ಪ್ರೀತಿ ಪ್ರಸ್ತಾವನೆಯ ತಯಾರಿ, ಅಂತೂ ಇಂತೂ ಇದ್ದ ದೈರ್ಯವನೆಲ್ಲವ ಸೇರಿಸಿ ಮೆಟ್ರೋ ಸಿಟಿಯ ಎಸ್ ಟಿ ಡಿ ಬೂತ್ಹೊಂದರ ಬಾಗಿಲು ಜಡಿದು ಫೋನಾಯಿಸಿದಾಗ ಅತ್ತ ಅದೇ ಮಧುರ ಧ್ವನಿ! ಹಲೋ ಎಂದು ಶುರುವಿಟ್ಟು ಪುಟ್ಟ ಪರಿಚಯದೊಂಗಿದೆ ನಡೆದದ್ದು ಪ್ರೀತಿಯ ಪ್ರಸ್ತಾವನೆ. ಅನಾಮಿಕೆಯಂಬ ದೇವತೆಗೆ ಅರ್ಪಿಸಿದ್ದ ಪೂಜೆ, ಕನಸುಗಳ ನೈವೇದ್ಯ ಫಲಕೊಡುವುದೆಂಬುದು ಭಕ್ತನ ಭಾವ! ಪೂಜೆಯ ಅರಿವಿಲ್ಲದ ದೇವಿ ತುಂಬ ಪ್ರಾಕ್ಟಿಕಲ್! ನಗರದ ವಾತಾವರಣ, ಸಿರಿವಂತಿಕೆ, ಬದುಕಿನ ಅರಿವಿದ್ದ ವಿದ್ಯಾರ್ಥಿ. ಆಕೆ ಆಗಲೇ ಎಣಿಸಿಯಾಗಿತ್ತು ಹಣ ಅಂತಸ್ತಿನ ಲೆಕ್ಕಾಚಾರ. ಸೊ, ನನ್ನ ಪ್ರೀತಿಸಲು ನಿನಗೇನೂ ಯೋಗ್ಯತೆಯಿದೆ ಎಂದು ಆಕೆ ಇತ್ತಿದ್ದಳು ಶಾಪ.
 
ನಗುವಿಗೆ ನಾಲಿಗೆಯಿಲ್ಲ, ನಗು ಹಲವು ಸನ್ನಿವೇಶಗಳ ಭಾವ, ಅದನರಿಯದ ಆತ ಅದಕೆಸರಿಟ್ಟಿದ್ದು ಪ್ರೀತಿಯೆಂದು. ಈ ಹುಡುಗರೇ ಹಾಗೆ, ಎಡವುವುದು ಜಾಸ್ತಿ, ನೋಟ, ನಗು, ಆಕರ್ಷಣೆಗೆ ಅವರಿಡುವ ಹೆಸರೇ ಪ್ರೀತಿ. ಆದರೇನು, ಎರಡು ವರ್ಷಗಳ ಅಂತರ, ಪ್ರೀತಿಯ ನಿರಂತರ ನಿತ್ಯ ನೈವೇದ್ಯ, ಕನಸುಗಳು ಕಟ್ಟಿ ಕೊಟ್ಟಿದ್ದ ಭುತ್ತಿ ದೊಡ್ಡದೇ ಮತ್ತು ಲವ್ ಫೇಲ್ಯೂರ್ ನ ನೋವು ಕೂಡ.
 
ಪ್ರೀತಿಯ ನಿರಾಕರಣೆಯ ನೋವು ಕಡಿಮೆಯೇನೂ? ಆತ ಸೊರಗಿ, ಕೊರಗಿ ಒಂಟಿಯಾಗಿ, ಬಾಲ್ಕನಿಯಲ್ಲಿ, ಟೆರೇಸಿನಲ್ಲಿ, ಬೆಳದಿಂಗಳ ರಾತ್ರಿಯಲ್ಲಿ, ಅಮಾವಾಸೆಯ ಕತ್ತಲಲ್ಲಿ ನಿರಾಕರಣೆಯ ನೋವು ಕಣ್ಣೀರಾಗಿ ಹರಿಯತೊಡಗಿತು, ಅತ್ತು ನಿತ್ರಾಣಗೊಂಡು ಆತ ಚೀರಿದ್ದು "ಪ್ರೀತಿಯಲಿ ಸಾಗರ ನಾನು..... ಅದರಲ್ಲಿ ಈಜಲಾರದೆ ಹೋದ ಮೀನು ನೀನು...... ಅನಾಮಿಕೆ!"
 
ತಪ್ಪಿನ ಅರಿವು, ಪಶ್ಚಾತಾಪ, ಕ್ಷಮೆಯಾಚನೆ ನಮ್ಮನ್ನು ಎಷ್ಟೋ ನಿರಾಳವಾಗಿಸುತ್ತವೆ, ಅಂತೆಯೇ ಆತ ನುಡಿದ
 
ಕ್ಷಮಿಸು....!!!
ಮನದ ಮಾತುಗಳನ್ನ,
ಬಚ್ಚಿಡಲಾಗದೆ ಬಿಚ್ಚಿಟ್ಟಿದ್ದಕ್ಕೆ
ಪ್ರಶಾಂತವಾದ ನಿನ್ನ,
ಮನಸಿನಲಿ ಅಲೆ ಹೆಬ್ಬಿಸಿದ್ದಕ್ಕೆ
ಕುಡಿಗಣ್ಣ ನೋಟವನು,
ತಪ್ಪಾಗಿ ಅರ್ಥೈಸಿದಕ್ಕೆ...
ಕ್ಷಮಿಸು  ನನ್ನ...!!!
 
ಆತನೆದೆಯಲ್ಲಿ ನಿರಾಕರಣೆ ದ್ವೇಶಹುಟ್ಟಿಸುವ ಬದಲು ಬದುಕು ನೋಡುವ ದೃಷ್ಟಿ ಬದಲಿಸಿತು, ಯಾವ ಬಡತನಕ್ಕೆ ಅನಾಮಿಕೆ ಎಂಬ ದೇವಿಯ ಶಾಪಬಿತ್ತೋ ಅದನ್ನು ತೊಲಗಿಸಲು ತನ್ನ ಕೆಲಸದಜೊತೆ ಓದಲು ಸುರುವಿಟ್ಟ, ಸಾಹಿತ್ಯ, ಪತ್ರಿಕೆ, ವೃತ್ತಿಪರ ಕೋರ್ಸಗಳು, ಮಾಸ್ಟರ್ ಡಿಗ್ರಿ ಹೀಗೆ ಓದುತ್ತ, ದುಡಿಯುತ್ತ ಸಾಗಿದ, ಆತನ ಓದು ಅರಿವು ಮೂಡಿಸಿತು, ಬರೆಸಿತು, ಬದುಕ ಬದಲಿಸಿತು. ಅರಿತವನ ಎದೆಯಲ್ಲಿ, ಅರಿವಿನ ಅಲೆಯೊಂದು ಬಂದು ಭ್ರಮೆಯನ್ನು ಬಡಿದೋಡಿಸಿತು.
 
ಭ್ರಮೆ
ಅಂದೊಮ್ಮೆ ಅಂದಿದ್ದೆ
ನೀನಿರದೆ ನಾನಿಲ್ಲ
ಒಲವಿಲ್ಲ, ಛಲವಿಲ್ಲ, ಬದುಕಿಲ್ಲ...
ಕಳೆದಾಯ್ತು ವರ್ಷಗಳ ನೆನಪುಗಳ ಜೊತೆಯಲಿ
ಅರಿತಾಯ್ತು!!! ನೀನಿರದೆ ನಾನುಂಟು
ಒಲವುಂಟು, ಚಲವುಂಟು, ಬದುಕುಂಟು...

ಆ ತಿರಸ್ಕಾರ, ಆತನೆದೆಯಲಿ ಮೂಡಿಸಿದ ನೋವು-ನಲಿವುಗಳೇನು.... ಮುಂದುವರಿಯುತ್ತದೆ.

ಬದುಕು ಘಟನೆಗಳಜೊತೆ ಪಾಠ ಕಲಿಸುತ್ತ ಹೋಗುತ್ತದೆ, ನಡೆದ ತಪ್ಪುಗಳು, ಅನುಭವಗಳಾಗುತ್ತವೆ, ಮತ್ತು ಮತ್ತದೇ ತಪ್ಪು ಮಾಡದಂತೆ ಎಚ್ಚರಿಸುತ್ತಾ ದಾರಿದೀಪವಾಗಿ ಬದಕು ಬೆಳಗಿಸುತ್ತದೆ. ಹೀಗೆ ಎಲ್ಲರಲ್ಲೂ ಬದುಕಿನ ಪಾಠಕಲಿಯುವ ನಾವು, ಪ್ರೀತಿಯೆಂಬ ಘಟನೆಯೊಂದು ವಿರುದ್ಧ ದಿಕ್ಕಿನಲ್ಲಿ ಸಾಗಿದಾಗ ಆತ/ಆಕೆಯ ಆಯ್ಕೆ, ಅಭಿಪ್ರಾಯ ಮತ್ತು ಗುರಿಗಳಿಗೆ ಗೌರವವಿತ್ತು, ನಮ್ಮ ಬದುಕ ತಿದ್ದಿಕೊಳ್ಳುವುದು ಅತ್ಯಗತ್ಯ ಅಲ್ಲವೇ? ಈ ಅರಿವಿನ ಅಂದರ, ನಮ್ಮ ಸಮಯ, ಬುದ್ದಿ ಮತ್ತು ಗೌರವಕ್ಕೆ ಧಕ್ಕೆ ಬರದಂತೆ ಕಾದು ಸುಂದರ ಬದುಕೊಂದು ಸುಡುಗಾಡಗದಂತೆ ನೋಡಿಕೊಳ್ಳುತ್ತದೆ. ಯೋಚಿಸಿ!

ಪ್ರೀತಿ, ನಾವು ನಮ್ಮ ಮನಸಿಗೆ ಕೊಡುವ ತರಬೇತಿ...ಇರಲಿ ಅದಕ್ಕೊಂದು ನೀತಿ… ಕಳೆದುದರ ಬಗ್ಗೆ ಚಿಂತಿಸುತ್ತ ಯಾಕೆ ಮಾಡ್ಕೋತೀರಿ ಪಚೀತಿ.

No comments:

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...