Wednesday, January 31, 2024

ಸ್ವತಂತ್ರರರೋ... ಅತಂತ್ರರೋ…

ದೇಶದ ಬೆನ್ನೆಲುಬು ಎನಿಸಿಕೊಂಡವರು
ಎಲ್ಲರ ಮುಂದೆ ಬೆನ್ನಬಾಗಿಸಿದವರು
ಚಿನ್ನದ ಬೆಳೆ ಬೆಳೆದು ಬಿಡಿಗಾಸಿಗೆ ಮಾರುವವರು
ಕನಿಷ್ಟ ಬೆಂಬಲ ಬೆಲೆಯನ್ನು ಪಡೆಯಲಾರದ ಕನಿಷ್ಠರು
ಮಧ್ಯವರ್ತಿಗಳಿಂದ ಮಾರಣ ಹೋಮವಾದವರು

ವರುಷವೆಲ್ಲ ಬೆಳೆದು ಒಪ್ಪತ್ತಿನ ಗಂಜಿಗೂ ಸಂಪಾದಿಸರಾದವರು
ಅಕ್ಷರಗಳಷ್ಟೆ ಅಕ್ಕರೆಯಾದವರು
ಹೆಜ್ಜೆಹೆಜ್ಜೆಗೂ ತುಳಿಯಲ್ಪಟ್ಟವರು
ವ್ಯವಸಾಯ ಮಾಡಬೇಕೇ ಎಂದು ಕೊರಗಿ ಕುಂತವರು
ನಾವು ಯಾರಿಗೂ ಬೇಡದ ರೈತರು!!!

Thursday, January 4, 2024

ಅರಿವಿನಾನಂದ ಪಡೆಯುತಿರಲಿ

ಕಲಿತು ಮಾಡಿದ ಸಾಧನೆ 'ಕುಲ' ಬೆಳಗಿಸಲಿ
ಕಲಿತದ್ದು ಕೊಂಬಾಗಿ ಕೊಲ್ಲದಿರಲಿ
ಗರ್ವದಲಿ ಮನ ಮೆರೆದು ಮುಳುವಾಗದಿರಲಿ
ಈ ಮನ, ಅರಿವಿನಾನಂದ ಪಡೆಯುತಿರಲಿ
ಅರಿತರಿತು ಅನಂತತೆಯಡೆಗೆ ಸಾಗುತಿರಲಿ

Wednesday, January 3, 2024

ಬದುಕಲಿಸಿರಲು

ನೋವಿಷ್ಟು, ನಲಿವಿಷ್ಟು
ಕಲಿತರಿತದ್ದು ಬೊಗಸೆಯಷ್ಟು
ಖುಷಿಕೊಟ್ಟ ಕೃಷಿ
ಗಟ್ಟಿಮಾಡಿದ ಅಪ್ಪನಾನಾರೋಗ್ಯ
ಕೊಂಚ ಬಲಿತ ಬರಹ
ಬರೆದೆರಡು ಪುಸ್ತಕ, ಬದುಕಲಿಸಿರಲು

ನಾನೆಟ್ಟ ಮರ

ನಾನೆಟ್ಟ ಮರ,
ಪ್ರೀತಿಯಲಿಟ್ಟ ಗೊಬ್ಬರ,
ಸುಳಿ ಕೊಳೆ ರೋಗಕ್ಕೆ ತತ್ತರ,
ಇಂದದಕೆ ಕೊಡಲಿಯೇ ಆದಾರ

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...