Wednesday, January 31, 2024

ಸ್ವತಂತ್ರರರೋ... ಅತಂತ್ರರೋ…

ದೇಶದ ಬೆನ್ನೆಲುಬು ಎನಿಸಿಕೊಂಡವರು
ಎಲ್ಲರ ಮುಂದೆ ಬೆನ್ನಬಾಗಿಸಿದವರು
ಚಿನ್ನದ ಬೆಳೆ ಬೆಳೆದು ಬಿಡಿಗಾಸಿಗೆ ಮಾರುವವರು
ಕನಿಷ್ಟ ಬೆಂಬಲ ಬೆಲೆಯನ್ನು ಪಡೆಯಲಾರದ ಕನಿಷ್ಠರು
ಮಧ್ಯವರ್ತಿಗಳಿಂದ ಮಾರಣ ಹೋಮವಾದವರು

ವರುಷವೆಲ್ಲ ಬೆಳೆದು ಒಪ್ಪತ್ತಿನ ಗಂಜಿಗೂ ಸಂಪಾದಿಸರಾದವರು
ಅಕ್ಷರಗಳಷ್ಟೆ ಅಕ್ಕರೆಯಾದವರು
ಹೆಜ್ಜೆಹೆಜ್ಜೆಗೂ ತುಳಿಯಲ್ಪಟ್ಟವರು
ವ್ಯವಸಾಯ ಮಾಡಬೇಕೇ ಎಂದು ಕೊರಗಿ ಕುಂತವರು
ನಾವು ಯಾರಿಗೂ ಬೇಡದ ರೈತರು!!!

No comments:

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...