Thursday, March 14, 2024

ಅರಿತು ಹಂಚೋಣ

ಬದಲಾಗದಿದ್ದರೆ ಬಡವಾದೆವು
ಕಲಿಯದಿದ್ದರೆ ಜಡವಾದೆವು
ಓದಿ-ಬರೆಯದಿದ್ದರೆ ಬರಡಾದೆವು
ಅರಿಯದಿದ್ದರೆ ಅಂಧರಾದೆವು
ದುಡಿಯದಿದ್ದರೆ ದುಃಖಿತರಾದೆವು
 
ಕುಳಿತು ಕುಬ್ಜನಾಗುವ ಬದಲು, ನಿಂತು ನೆರಳಾಗು
ನಿಂತು ನರಳುವ ಬದಲು, ನಡೆದು ನೆಲೆಯಾಗು
ಕೂತು ಕೊರಗುವ ಬದಲು, ಕಲಿತು ಕಲೆಯಾಗು
ಕಲಿತದ್ದ ಕೊಳೆಸುವ ಬದಲು, ತಿಳಿಸಿ ತಿಳಿಯಾಗು
ಸುತ್ತಲಿದ್ದವರ ಸೋಲಿಸುವ ಬದಲು, ಸ್ಫೂರ್ತಿಯಲಿ ನೀ ಗುರುವಾಗು

No comments:

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...