Sunday, July 28, 2024

ರೈತ ಮಕ್ಕಳೇ...

ಬನ್ನಿ ನನ್ನೂರಿಗೆ
ಸ್ವರ್ಗದ ತವರಿಗೆ
ಗಿಡವೊಂದು ಮರವಾಗೆ
ಕಾಳೊಂದು ತೆನೆಯಾಗೆ
ದೇಶಕನ್ನವ ನೀಡುವಲ್ಲಿಗೆ

ಇಲ್ಲಿ, ರಾಗ ದ್ವೇಷಗಳುಂಟು
ಪ್ರೀತಿ ಪ್ರೇಮಗಳುಂಟು
ನೆನಪುಗಳುಂಟು
ನೀವಿಟ್ಟ ಹೆಜ್ಜೆಗುರುತುಗಳುಂಟು
ಆದರಿಸುವ ಭುಜಬಲಗಳುಂಟು

ಬೆಂದ ಬೇಗೆಯಲಿ
ನೊಂದು ನಲಿಯುತಲಿ
ಮೆಟ್ಟ ಊರಲ್ಲಿ ಒಂಟಿ ಅಲೆಯುತಲಿ
ನಿಮ್ಮ ಮನ ಸುಡುದಿರಲಿ
ಕಾದಿಹುದು ನಿಮ್ಮ ನೆಲವಿಲ್ಲಿ

ಬನ್ನಿ ನನ್ನೂರಿಗೆ
ಸ್ವರ್ಗದ ತವರಿಗೆ...

- ಪ್ರಸಾದ್ ಟಿ ಎಮ್

No comments:

ರೈತ ಮಕ್ಕಳೇ...

ಬನ್ನಿ ನನ್ನೂರಿಗೆ ಸ್ವರ್ಗದ ತವರಿಗೆ ಗಿಡವೊಂದು ಮರವಾಗೆ ಕಾಳೊಂದು ತೆನೆಯಾಗೆ ದೇಶಕನ್ನವ ನೀಡುವಲ್ಲಿಗೆ ಇಲ್ಲಿ, ರಾಗ ದ್ವೇಷಗಳುಂಟು ಪ್ರೀತಿ ಪ್ರೇಮಗಳುಂಟು ನೆನಪುಗಳುಂಟು ನ...