Wednesday, December 6, 2023

ಅರಿಯೋಣ ಅಕ್ಕರೆಯ ಅಂತರಂಗವೊಂದ

ಸೃಷ್ಟಿಯ ಸೆಲೆ ನೀನು
ಸ್ಪೂರ್ತಿಯ ಅಲೆ ನೀನು
ತ್ಯಾಗದ ನೆಲೆ ನೀನು
ಬರಡಾದ ಬದುಕ ಬೆಳೆಗುವ ಹಣತೆಯು ನೀನು
 
ಅರಿತವರುಂಟೆ ನಿನ್ನಂತರಾಳ
ಅದು ಸಾಗರದಾಳ
ನಡೆದಿವುದು ಅಲ್ಲಿ ಭಾವ-ಬೆಸುಗೆಗಳ ಮೇಳ
ಬೀಳದಿರಲಿ ನಿನ್ನಕನಸುಗಳಿಗೆ ಕೋಳ
 
ಅರಿತೆವೆಂದು ಹಟ್ಟಹತ್ತಿಸಿದವರು
ಅರಿವಿಲ್ಲದ ಅಂದರು
ಅರಿಯದೆ ಅಸುಳೆಗಳ ಕೊಂದರು
ನೀ ಅವರ ಕೈಗೆ ಸಿಗದಿರು
 
ತಾಯಿ-ತಂಗಿ, ಗೆಳತಿ-ಒಡತಿ
ನಿನ್ನದಪಾರ ರೂಪ
ಶಕ್ತಿ-ಸೃಷ್ಟಿ ನಿನ್ನೆರಡು ದೃಷ್ಟಿ
ಸಿಗುತಿರಲಿ ನಿನ್ನ ಬೆಳವಣಿಗಿಗೆ ಪುಷ್ಟಿ

No comments:

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...