Sunday, December 17, 2023

ಬೆಳೆದು ಬೆಳಕಾಗುವ

ನಾವೊಂದು ಹೆಮ್ಮರದ ನೆರಳು
ಬಾಹುಬಲ ಚಾಚಬೇಕಿದೆ ಬುಡದಿಂದಲೇ
ಬೇರಬಿಡದೆ ಭುವಿಯ ಸುತ್ತುವರಿಯಲು 

ಚಿಮ್ಮಿ ಬಿರಿದು ಬೆಳೆದ ಬಂಧುಗಳು
ಬುಡ ಬಿಟ್ಟರೆಂತು
ಮರನಿಂತಿತೇ ನೆರಳಿಲ್ಲದೆ

ಈಗೀಗ, ಮರ ಬೇಡಿದೆ ಆಸರೆಯ
ಅರಿವಿನಾಸರೆಯ, ಬೆಳಕಿನಾಸೆರೆಯ
ಬುಡಬಿಡದೆ ಬೆಳೆದು ನಿಲ್ಲುವವರಾಸರೆಯ

ಮರ ಮರುಗದಿರಲಿ
ಮನ ಬೆಳಗುತಿರಲಿ
ಅರಿವು ಅಂತರವ ತರದಿರಲಿ

ಅರಿತು ಮರೆಯಾಗದೆ
ಬೆಳೆದು ಬೆಳಕಾಗುವ
ಮರದ ಬುಡಬಿಡದೆ ಬೆಳೆದು ಬೆಳಕಾಗುವ

No comments:

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...