Wednesday, November 22, 2023

ಯುವ ಸಮೂಹ ಪುಸಕ ಗಳನ್ನು ಓದುವ ರೀತಿ ಮನಸ್ಸುಮೂಡಿಸ್ಸವುದು ಹೇಗೆ

 ಹಿರಿಯರು -
 
ತಿಳಿಹೇಳಬೇಕಿದೆ ನಾವು "ಓದು" ಕರ್ತವ್ಯವಲ್ಲವೆಂದು
ಪ್ರಸ್ತುತಪಡಿಸಬೇಕಿದೆ ನಾವು "ಓದು" ಉಡುಗೊರೆಯಂದು
 
ಅರಿವ ಪಸರಿಸಬೇಕಿದೆ ಇಂದಿನೋದುಗನೆ ನಾಳೆಯ ನಾಯಕ
ತಿಳಿಸಬೇಕಿದೆ ಪುಸ್ತಕಗಳೋದಿದ ಯುವಶಕ್ತಿಯೇ ದೇಶದ ನಾವಿಕ
 
ನೀಡಬೇಕಿದೆ ನಾವು ರುಚಿಸುವ ಪುಸ್ತಕವ
ಬಲಪಡಿಸಲು ಯುವಶಕ್ತಿಯ ಮಸ್ತಕವ
 
ಯುವಕರು –
 
ಪುಸ್ತಕಗಳಿವು ಆತ್ಮದಸಿವಿಗೆ ಆಹಾರ
ಓದಿದರೆ ನೀ-ಗಳಿಸುವುದಿದೆ ಅಪಾರ
 
ಓದಬೇಕಿದೆ ನಾವು ಪಠ್ಯದಿಂದಾಚೆಗೂ
ಸಿಕ್ಕಿ-ಬೀಳದಿರಲು ದೈಹಿಕ-ಮಾನಸಿಕ ಒತ್ತಡದ ಗೋಚಿಗೂ
 
ಪುಸ್ತಕದ ಪುಟಗಳಲ್ಲಿದೆ ಅಸಾಧಾರಣ ಶಕ್ತಿ
ತಿಳಿದರೆ ನೀ ಪಡೆವೆ ನಾಯಕನ ಯುಕ್ತಿ
 
ಪುಸ್ತಕಗಳಿವೋ ನಿನ್ನೊಡಲ ಸಲಹೆಗಾರ
ಅರಿತರೆ ನೀ ಸೋಲಿಲ್ಲದ ಸರದಾರ!!!

No comments:

ದೇವರನ್ನು ಶಪಿಸಲಿಲ್ಲ, ದೇವರಾದರು!

ಹೊಸಹಳ್ಳಿ ಶಾಂತಪ್ಪ ಎಂದು ಚಿರಪರಿಚಿತರಾದ ಇವರು ಹುಟ್ಟಿದ್ದು 1977 ಜೂನ್ 7 ರಂದು, ಇವರ ಹುಟ್ಟೂರು, ಟಿ ನರಸೀಪುರ ಬಳಿಯ ಮೂಗೂರು ಹೊಸಹಳ್ಳಿ. ಲೇಟ್ ಸುಬ್ಬಪ್ಪ ...